News Karnataka Kannada
Friday, May 17 2024
ಕ್ಯಾಂಪಸ್

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸ್ಮಾರ್ಟ್ ಅಪ್ ಚಾಲೆಂಜ್

Smart Up Challenge at St. Aloysius College
Photo Credit : News Kannada

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವತಿಯಿಂದ ಇಂಟರ್ ನ್ಯಾಶನಲ್ ಯೂತ್ ಡೇ ಅಂಗವಾಗಿ ಯುವಕರಿಗೆ ಹಸಿರು ಕೌಶಲ್ಯಗಳು ಎಂಬ ಹೆಸರಿನಲ್ಲಿ 49 ಗಂಟೆಗಳ ಸ್ಮಾರ್ಟ್ ಅಪ್ ಚಾಲೆಂಜ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಸಂತ ಅಲೋಶಿಯಸ್ ಕಾಲೇಜಿನ ರೋಬರ್ಟ್ ಸ್ವೀಕೆರಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಎಂಎಸ್‌ಎಂಇ ಸಹಸದಸ್ಯ ಹಾಗೂ ಸಿಎ ಎಸ್‌ಎಸ್ ನಾಯಕ್ , ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಉತ್ತಮ ನಾಯಕನಾಗಿ ದೇಶವನ್ನು ಮುನ್ನಡೆಸುವ ಕೆಲಸ ಯುವ ಸಮುದಾಯ ಮಾಡಬೇಕೆಂದರು.

ಬಳಿಕ ಮಾತನಾಡಿದ ಕಲ್ಬಾವಿ ಕ್ಯಾಶು ಸಂಸ್ಥೆಯ ಮಾಲಕರಾದ ಕಲ್ಬಾವಿ ಪ್ರಕಾಶ್ ರಾವ್, ತಾನು ಸಾಧನೆ ಮಾಡಬೇಕೆಂಬ ಹಂಬಲವನ್ನು ಮೈಗೊಂಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ, ತಂತ್ರಜ್ಞಾನ ಮುಂದುವರಿದೆ, ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಮುಖ್ಯ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ, ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿಕೊಂಡು, ಯಶಸ್ಸು ಕಾಣಬೇಕು. ಕ್ರಿಯಾತ್ಮಕ ಚಟುವಟಿಕೆಯ ಮೂಲಕ ಪ್ರಾಯೋಗಿಕ ಸಂಶೋಧನೆ ಮಾಡಿ,ಕೆಲಸದಲ್ಲಿ ಯಶಸ್ಸು ಕಾಣಬೇಕೆಂದರು. ಈ ವೇಳೆ ಕಾಲೇಜಿನ ರಿಜಿಸ್ಟರ್ ಡಾ|ಆಲ್ವಿನ್ ಡೇಸಾ, ಕಾರ್ಯಕ್ರಮದ ಸಂಯೋಜಕರಾದ ಡಾ| ಆದರ್ಶ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು