ಸಾಣೂರು: ಅಕ್ಟೋಬರ್ 15 ರಂದು ಪ್ರಕೃತಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸಲಹಾ ಸಮಿತಿ ಉದ್ಘಾಟನಾ ಕಾರ್ಯಕ್ರಮ ಹಾಗೂ ‘ಪ್ರಕೃತಿ ಐಕ್ಯಂ’ ಎನ್ನುವ ಹೆಸರಿನ ಅಡಿಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯರಾಗಿ ಡಾ. ಜಯಶ್ರೀ ( ಶ್ರೀನಿವಾಸ ಕಾಲೇಜು ಮಂಗಳೂರು), ಡಾ. ರಾಖಿ ಮಥಾಯ್ ಆಂಟೋನಿ (ಲೀಡ್ ಮಾಸ್ಟರ್ ಅಕಾಡೆಮಿಕ್ ವಲೀಡ್ಟರ್ ಬೆಂಗಳೂರು), ಡಾ. ನಂದಿನಿ ( ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್ ಜೊವಾಲಜಿ , ಗೋವಾ), ರಘು ಟಿ. ವೈ, ( ಶ್ರೀ ಸತ್ಯ ಸಾಯಿ ಪ್ರೌಢ ಶಾಲೆ ಅಳಿಕೆ), ನಾಗೇಶ್ ಶೆಟ್ಟಿ ಬಿ. ( ವಕೀಲರು, ಮೂಡಬಿದ್ರೆ), ಕರುಣಾಕರ್ ಎಸ್. ಕೋಟ್ಯಾನ್ ( ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಾಣೂರ್), ಗೋಕುಲ ಎಂ .ವಿ. ಪಾಟ್ನರ್ ಆಫ್ ಫೈನಾನ್ಸ್ ವಿ ಅಂಡ್ ಟ್ಯಾಕ್ಸ್ ಕನ್ಸಲ್ಟ್ ಬೆಂಗಳೂರು ) ಇವರೆಲ್ಲನ್ನು ಪ್ರಕೃತಿ ವಿದ್ಯಾ ಸಂಸ್ಥೆ ಅಧ್ಯಕ್ಷ ರಾದ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ಟ್ ರವರು ಪದಗ್ರಹಣ ಮಾಡಿ, ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಶೋಕ್ ಕುಮಾರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪದ್ಮನಾಭ ಗೌಡರವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಅನಿಸಿಕೆ , ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಹಚ್ಚಿಕೊಂಡರು ಹಾಗೂ ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರ ಬಗ್ಗೆ ಮೆಚ್ಚುಗೆಯನ್ನೂ ಹಾಗೂ ತಮ್ಮ ವಿದ್ಯಾರ್ಥಿ ಜೀವನದ ಸುಂದರ ಕ್ಷಣಗಳನ್ನು ಮೆಲುಕು ಹಾಕಿದರು.
ಪ್ರಕೃತಿ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಆಡಿಳಿತಾಧಿಕಾರಿ ಮಮತ ಶರ್ಮ ರವರು ಎಲ್ಲರನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆಯಾದ ವಿನ್ಯಾರವರು ಎಲ್ಲರಿಗೂ ವಂದಿಸಿದರು.