ಮೂಡುಬಿದಿರೆ: ಡಿ.ವಿ.ಜಿ ಯವರ ಕಗ್ಗದಲ್ಲಿ ದೈವ ಸಾಕ್ಷಾತ್ಕಾರವಿದೆ. ಜೀವನಾನುಭವದ ಸತ್ವವಿದೆ. ಗೀತೆಯ ಬೆಳಕಿದೆ. ಅದರ ಸಾನಿಧ್ಯವಲಯಕ್ಕೆ ಸಿಕ್ಕಿಬಿದ್ದವುಗಳೆಲ್ಲ ಜ್ಯೋತಿರ್ಮಯವಾಗುತ್ತದೆ. ಕಗ್ಗ ದಾರ್ಶನಿಕ ದರ್ಶನ ಶಾಸ್ತ್ರವಾಗಿ ಮನುಕುಲ ಕಂಡ ಶ್ರೇಷ್ಠ ಪ್ರದೀಪ್ತಿ ಎಂದು ವಾಗ್ಮಿ ಜಿ. ಎಸ್ ನಟೇಶ್ ಹೇಳಿದರು.
ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ ಕಗ್ಗದ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆವಹಿಸಿದರು. ಪ್ರತಿಯೊಂದು ವಿದ್ಯಾರ್ಥಿಯು ಮನುಷ್ಯ ಹೃದಯಗಳನ್ನು ಮಾನವತಾದಾರದಿಂದ ಪೋಣಿಸುವ ಮಾನವತಾವಾದಿಯಾಗಲು ಮಂಕುತಿಮ್ಮನ ಕಗ್ಗ ಬೆಳಕಾಗಲಿ ಎಂದರು.
ಕರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಯಶಸ್ವಿನಿ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಡಾ.ವಾದಿರಾಜ್ ಕಲ್ಲೂರಾಯ ವಂದಿಸಿದರು.