ಮಂಗಳೂರು: ವಿಶ್ವವಿದ್ಯಾಲಯ ಕಾಲೇಜು ಮಂಗಳೂರು ಇಲ್ಲಿನ ನೇಚರ್ ಕ್ಲಬ್ ಸಂಯೋಜಿಸಿದ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್, ಕರ್ನಾಟಕ ಸರಕಾರ ಮತ್ತು ಯುಎನ್ಐಸಿಇಎಫ್ ಸಹಯೋಗದಿಂದ “ವಿದ್ಯಾರ್ಥಿಗಳಿಗೆ ಹವಾಮಾನ ಬದಲಾವಣೆ ಕುರಿತ ಒರಿಯಟೇಶನ್ ಕಾರ್ಯಕ್ರಮವನ್ನು ಶನಿವಾರದಂದು ರವೀಂದ್ರ ಕಲಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಾಸೂಯ ರೈ ಹವಾಮಾನ ಬದಲಾವಣೆ ಮತ್ತು ಪ್ರಕೃತಿ ಅಧ್ಯಯನದ ಕುರಿತು ಕಾರ್ಯಕ್ರಮದ ಸಂಪೂರ್ಣವಾಗಿ ಸದುಪಯೋಗ ಪಡೆಯುವಂತೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಸಿಇಇನಿಂದ ತರಬೆತಿ ಪಡೆದ ಮುಖ್ಯ ತರಬೇತುದಾರ ಪ್ರಕೃತಿ ಅಧ್ಯಯನ ಮತ್ತು ಹವಾಮಾನ ಬದಲಾವಣೆ ಕರ್ನಾಟಕದ ಡಾ. ಸಿದ್ದರಾಜು ಎಮ್ ಎನ್ ಹವಮಾನ ಬದಲಾವಣೆ ಮತ್ತು ಅದರ ಭೂಮಿ ಮೇಲೆ ಅಗುವ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಚಟುವಟಿಕೆಗಳನ್ನು ಏರ್ಪಪಡಿಸಿದರು.
ನೇಚರ್ ಕ್ಲಬ್ ನ ಸಂಯೊಜಕರಾದ ಡಾ. ಸಂಜಯ್ ಅನ್ರವ್ ಸ್ವಾಗತಿಸಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನೆಚರ್ ಕ್ಲಬ್ ನ 100 ವಿದ್ಯಾರ್ಥಿಗಳು ಭಾಗವಹಿಸಿದರು.