ಮಂಗಳೂರು: ನಮ್ಮ ಆತ್ಮಸಾಕ್ಷಿಯು ಯಾವುದೇ ಕಾನೂನಿಗಿಂತ ನಮ್ಮನ್ನು ರಕ್ಷಿಸಬಲ್ಲದು ಮತ್ತು ಅದನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಆದಾಗ್ಯೂ, ಕಾನೂನಿನ ಸರಿಯಾದ ಅನುಷ್ಠಾನ, ಕಾನೂನಿಗೆ ಗೌರವ, ನಾಗರಿಕ ಕರ್ತವ್ಯ ಪ್ರಜ್ಞೆ ಮತ್ತು ನೈತಿಕ ಜವಾಬ್ದಾರಿ ಮಾನವ ಕಳ್ಳಸಾಗಣೆಯನ್ನು ನಿಯಂತ್ರಿಸುವಲ್ಲಿ ಇವು ಪ್ರಮುಖವಾಗಿವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ನಡೆದ ಮೊದಲ ಮಾನವ ಕಳ್ಳ ಸಾಗಣೆ ವಿರೋಧಿ ಕ್ಲಬ್ ನ ಆಯೋಜಿಸಲಾದ ಮಾನವ ಕಳ್ಳ ಸಾಗಣೆ ಕನ್ಸರ್ ಅಂಡ್ ಸ್ಟ್ರ್ಯಾಟಜೀಸ್ ಕುರಿತ ಒಂದು ದಿನದ ಕಾರ್ಯಗಾರದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದರು.
ಮಾನವ ಕಳ್ಳ ಸಾಗಣೆ ನಿರ್ಮೂಲನೆಗೆ ಶಿಕ್ಷಣದ ಜೊತೆಗೆ ಜಾಗೃತಿ ಅಗತ್ಯ ನಾವು ಸಂಘಟಿತರಾದಾಗ ಮಾತ್ರ ಈ ವಿಷಯಗಳನ್ನು ತೊಡೆದುಹಾಕಲು ಸಾಧ್ಯ” ಎಂದು ಅವರು ಹೇಳಿದರು.
ಮುಖ್ಯ ಅತಿಥಿ, ಮಂಗಳೂರು ಉತ್ತರ ಉಪವಲಯ ಸಹಾಯಕ ಪೊಲೀಸ್ ಆಯುಕ್ತ ಎಸ್.ಮಹೇಶ್ ಕುಮಾರ್, ಮಾನವ ಕಳ್ಳಸಾಗಣೆಯು ವಿಶ್ವದ ಸಮಾಜದಲ್ಲಿ ಮೂರನೇ ಕೆಟ್ಟ ಪಿಡುಗಾಗಿದೆ ಎಂದು ಹೇಳಿದರು. ಈ ದಂಧೆ ಕಾನೂನಿನ ಅರಿವಿಲ್ಲದೆ ನಮ್ಮ ಸುತ್ತಲೂ ನಡೆಯುತ್ತಿದೆ ಮತ್ತು ಸಾಮಾನ್ಯ ಜನರು ಅದನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಕೈಜೋಡಿಸಿ ಎಂದು ಅವರು ಹೇಳಿದರು.
ಇಂಟರ್ನ್ಯಾಷನಲ್ ಜಸ್ಟೀಸ್ ಮಿಷನ್ ಸ್ಟ್ರಾಟೆಜಿಕ್ ಎಂಗೇಜ್ ಮೆಂಟ್ ಮುಖ್ಯಸ್ಥೆ ಪ್ರತಿಮಾ ಎಂ, ಗೌರವಾನ್ವಿತ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದರು. ಪ್ರಿನ್ಸಿಪಾಲ್ ಡಾ.ಅನಸೂಯಾ ರೈ ಮತ್ತಿತರರು ಉಪಸ್ಥಿತರಿದ್ದರು.
ಮಾನವ ಕಳ್ಳಸಾಗಣೆ ವಿರೋಧಿ ಕ್ಲಬ್ ಅಧ್ಯಕ್ಷ ಪ್ರೊ.ಜಯರಾಜ್ ಅಮೀನ್ ಅತಿಥಿಗಳನ್ನು ಸ್ವಾಗತಿಸಿದರು. ಇದರ ಮುಖ್ಯಸ್ಥ ಸಮಾಜಶಾಸ್ತ್ರ ವಿಭಾಗದ ಡಾ.ಗಾಯತ್ರಿ ಎನ್. ಸಮಾರಂಭವನ್ನು ನಿರ್ವಹಿಸಿದರು. ಎಎಚ್ ಟಿಸಿ ಸದಸ್ಯ ಕಾರ್ಯದರ್ಶಿ ಡಾ.ನಾಗರತ್ನ ಕೆ. ವಿಸ್ತೃತ ವಂದನಾರ್ಪಣೆ ಮಾಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಕಾಲೇಜಿನ ಬೋಧಕೇತರ ಸಿಬ್ಬಂದಿ ಹಾಜರಿದ್ದರು.