ಮಂಗಳೂರು: ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ವ್ಯವಹಾರಾಡಳಿತ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆರತಿ ಶ್ಯಾನುಭಾಗ್ರವರ “ ಸ್ಟಡಿ ಆನ್ ಇಶ್ಯೂಸ್, ಚಾಲೆಂಜಸ್ ಆಂಡ್ ಮಾರ್ಕೆಟಿಂಗ್ ಸ್ಟ್ರಾಟೆಜಿಸ್ ಅಡಾಪ್ಟೆಡ್ ಇನ್ ನ್ಯೂ ಪ್ರೊಡಕ್ಟ್ ಪ್ರಮೋಷನ್ ಆಫ್ ಪ್ರೈವೇಟ್ ಲೈಫ್ ಇನ್ಸುರೆನ್ಸ್ ಸೆಕ್ಟರ್: ಆ ಕಂಪೇರೇಟಿವ್ ಅನಾಲಿಸಿಸ್ ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾ. ವೈ. ಮುನಿರಾಜುರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಆರತಿ ಶ್ಯಾನುಭಾಗ್ರವರು ಪ್ರಕಾಶ್ ಶ್ಯಾನುಭಾಗ್ ಹಾಗೂ ಸುವರ್ಣ ಶ್ಯಾನುಭಾಗ್ ದಂಪತಿಯ ಪುತ್ರಿ ಹಾಗೂ ಮನೋಜ್ಕುಮಾರ್ ಶರ್ಮಾರವರ ಧರ್ಮಪತ್ನಿ.