ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿರುವ ಡಾ. ಹಾಮಾನಾ ಸಂಶೋಧನ ಕೇಂದ್ರದ ಕನ್ನಡ ಸಾಹಿತ್ಯ ವಿಭಾಗದ ಶೈಕ್ಷಣಿಕ ಸಲಹಾ ಸಮಿತಿ ಸಭೆಯು ಇತ್ತೀಚೆಗೆ ನಡೆಯಿತು.
ಕೇಂದ್ರದ ಪಿ.ಎಚ್. ಡಿ. ವಿದ್ಯಾರ್ಥಿಗಳು ಭಾಗವಹಿಸಿದ್ದು ತಮ್ಮ ಆಗಸ್ಟ್ ತಿಂಗಳ ಅರ್ಧವಾರ್ಷಿಕ ಅಧ್ಯಯನ ವರದಿಗಳನ್ನು ಮಂಡಿಸಿದರು. ಕೇಂದ್ರದ ನಿರ್ದೇಶಕರಾದ ಡಾ. ಎಸ್. ಡಿ. ಶೆಟ್ಟಿ., ಸಮಿತಿಯ ಅಧ್ಯಕ್ಷರಾದ ಡಾ. ಎ. ಮೋಹನ್ ಕುಂಟಾರ್, ಮಾರ್ಗದರ್ಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಡಾ. ಶ್ರೀಧರ್ ಹೆಚ್. ಜಿ. ಭಾಗವಹಿಸಿದ್ದರು.
ಇದೇ ವೇಳೆ ಇತ್ತೀಚೆಗೆ ಕುವೆಂಪು ಭಾಷಭಾರತಿ ಪ್ರಾಧಿಕಾರದ 2021ನೇ ಸಾಲಿನ ಪುಸ್ತಕ ಪ್ರಶಸ್ತಿ ಪಡೆದಿರುವ ಡಾ ಎ. ಮೋಹನ್ ಕುಂಟಾರವರಿಗೆ ಸಂಸ್ಥೆಯ ವತಿಯಿಂದ ಪ್ರಾಚಾರ್ಯ ಡಾ. ಪಿ. ಎನ್. ಉದಯಚಂದ್ರರವರು ಸನ್ಮಾನಿಸಿದರು. ಉಪಪ್ರಾಚಾರ್ಯ ಡಾ. ಎ. ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.