News Karnataka Kannada
Monday, April 29 2024
ಕ್ಯಾಂಪಸ್

ಮೈಸೂರಿನಲ್ಲಿ ನಾರಾಯಣ ಶಿಕ್ಷಣ ಸಂಸ್ಥೆ ಆರಂಭ

College
Photo Credit : News Kannada

ಮೈಸೂರು : ಏಷ್ಯಾದ ಅತಿದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಾರಾಯಣ ಗ್ರೂಪ್ ಆಫ್ ಸ್ಕೂಲ್ಸ್ ಮತ್ತು ಪಿಯು ಕಾಲೇಜುಗಳು ಈಗ ಮೈಸೂರಿನ ಶ್ರೀರಾರಂಪುರದ ಚೈತ್ರಾ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ತನ್ನ ಚಟುವಟಿಕೆ ಕಾರ್ಯಾರಂಭಿಸಿತು.

ನಾರಾಯಣ ಗ್ರೂಪ್, ಮೈಸೂರು ಶಾಖೆಯ ಆಪರೇಷನ್ಸ್ ವಿಭಾಗದ ಮುಖ್ಯಸ್ಥ ಕಾಳೇಶ, ಬುಧವಾರ ಮೈಸೂರಿನ ಶ್ರೀರಾಂಪುರದಲ್ಲಿ ತನ್ನ ಮೊದಲ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ನಾರಾಯಣ ಗ್ರೂಪ್ ಆಫ್ ಆಫ್ ಸ್ಕೂಲ್ಸ್ ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 43 ವರ್ಷಗಳ ಪರಿಣತಿಯನ್ನು ಹೊಂದಿದೆ. ಭಾರತದಾದ್ಯಂತ 23 ರಾಜ್ಯಗಳಲ್ಲಿ 600 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದ್ದೇವೆ. ಸಂಸ್ಥೆಯಲ್ಲಿ ಈ ವರೆಗೆ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದಾರೆ. ಬೆಂಗಳೂರಿನಲ್ಲಿಯೇ 33 ಸಂಸ್ಥೆಗಳನ್ನು ಹೊಂದಿದ್ದು 45000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.

ಇದೀಗ ಎಜುಕೇಷನ್ ಹಬ್ ಆಗಿ ಗುರುತಿಸಿಕೊಂಡಿರುವ ಮೈಸೂರಿನಲ್ಲಿಯೂ ಸಂಸ್ಥೆಯನ್ನು ಆರಂಭಿಸಲಾಗಿದೆ. ಸಂಸ್ಥೆಯು ನಾರಾಯಣ ಸ್ಕೊಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ ಆಯೋಜಿಸುವ ಮೂಲಕ ಮೈಸೂರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರತಿಭಾನ್ವೇಷಣೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಿದೆ ಎಂದು ತಿಳಿಸಿದರು. ಮೈಸೂರಿನಾದ್ಯಂತ ಇನ್ನೂ 3 ಶಾಲಾ ಕಾಲೇಜು ಹಾಗೂ ಕೋಚಿಂಗ್ ಸೆಂಟರ್ ಕೂಡ ತೆರೆಯಲಿದ್ದೇವೆ. ನಾರಾಯಣ ಗ್ರೂಪ್ ಅನುಭವಿ ಆರ್ ಡಿ ತಂಡವನ್ನು ಹೊಂದಿದ್ದು, ಸಿಬಿಎಸ್‌ಸಿ ಪಠ್ಯಕ್ರಮ, ವಿದ್ಯಾರ್ಥಿ ಕ್ಷೇಮ ಕಾರ್ಯಕ್ರಮಗಳು, ಒಲಂಪಿಯಾಡ್ ಕಾರ್ಯಕ್ರಮಗಳು, ಶಾಲಾ ಹಂತದಲ್ಲಿ ಸಮಗ್ರ ಐಐಟಿ ಮತ್ತು ಎನ್‌ಇಇಟಿ ಫೌಂಡೇಶನ್ ಕಾರ್ಯಕ್ರಮಗಳಲ್ಲಿ ಪರಿಣಿತರನ್ನು ಹೊಂದಿದೆ.

ಸಂಸ್ಥೆಯು ಭಾರತದಲ್ಲಿ ಹೆಚ್ಚು ಸುಸಜ್ಜಿತ, ವೃತ್ತಿ-ಆಧಾರಿತ ಶಿಕ್ಷಣವನ್ನು ಒದಗಿಸುತ್ತಿದೆ ಐಐಟಿ-ಜೆಇಇ, ಎನ್‌ಇಇಟಿ, ಕೆಸಿಇಟಿ, ಮತ್ತು ಇತರ ಹೆಚ್ಚು  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ವಿದ್ಯಾರ್ಥಿಗಳನ್ನು ರೂಪಿಸುವ ಪ್ರಸಿದ್ದವಾದ ಸಂಸ್ಥೆ ನಾರಾಯಣ ಗ್ರೂಪ್ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಚೈತ್ರಾ ಶಾಲಾ ಮತ್ತು ಪಿಯು ಕಾಲೇಜಿನ ಅಧ್ಯಕ್ಷ ಗುರುರಾಜ್, ಅಧ್ಯಕ್ಷೆ ಪುಷ್ಪಲತಾ ಉಪಸ್ಥಿತರಿದ್ದರು.

ಫೆಬ್ರವರಿ 6 ರಂದು ಎನ್‌ಎಸ್‌ಎಟಿ ಟ್ಯಾಲೆಂಟ್ ಡ್ರೈವ್:
ಫೆಬ್ರವರಿ 6 ರಂದು, 10 ನೇ ತರಗತಿಯಲ್ಲಿ ಓದುತ್ತಿರುವವರಿಗೆ, ನಾರಾಯಣ ಗ್ರೂಪ್‌ನಿಂದ ಶೇ. 100 ರಷ್ಟು ಪ್ರವೇಶ ವಿದ್ಯಾರ್ಥಿವೇತನ ಪಡೆಯಲು ಎನ್‌ಎಸ್‌ಎಟಿ ಎಂಬ ಟ್ಯಾಲೆಂಟ್ ಡ್ರೈವ್ ಪರೀಕ್ಷೆ ಹಮ್ಮಿಕೊಂಡಿದೆ. ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಅದೇ ದಿನ, 10.30 ರಿಂದ 12.30 ರ ನಡುವೆ ಪೋಷಕರಿಗೆ ಮಾರ್ಗದರ್ಶನವನ್ನು ಸಹ ಆಯೋಜಿಸಲಾಗುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 7022662586 ಅನ್ನು ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು