*ಬದುಕಿನ ಸರಳತೆ ದೊಡ್ಡ ಆದರ್ಶ*

ಚೀನಾದ ಒಬ್ಬ ಯುವಕ ದುಬಾರಿ ಮೊಬೈಲು ಖರೀದಿಸಲು ತನ್ನ ಕಿಡ್ನಿಯನ್ನು ಮಾರಿದ  ಘಟನೆ ಆಘಾತಕಾರಿ ಆದರೂ ಪ್ರಪಂಚದ  ಆಢಂಬರದ  ಪ್ರತೀಕ.
ಪ್ರಸ್ತುತ ತಮಗಾಗಿ ಬದುಕದೆ ಜಗತ್ತಿನ ಮುಂದೆ ಪ್ರದರ್ಶನಕ್ಕಾಗಿ ಬದುಕುವ ಜನರ ಸಂಖ್ಯೆ ಹೆಚ್ಚುತ್ತಿದೆ.
ಆಧುನಿಕತೆಯೆಡೆಗಿನ ಸೆಳೆತಗಳನ್ನು ಮಿತಿಮೀರಿ ಬಯಸುವ ಮನುಷ್ಯನ ಒಟ್ಟು ಬದುಕು ಹದತಪ್ಪಿದಂತಿದೆ.
ಈ ಆಧುನಿಕ ಜಗತ್ತಿನಲ್ಲಿ ಸರಳವಾಗಿ ಬದುಕುವುದು  ಅತಿ ಕಠಿಣವಾದ ಕೆಲಸ. ಸರಳತೆಯಿಂದ ಹೆಚ್ಚುದೂರ ಕಾಯ್ದುಕೊಳ್ಳಲು  ಎಷ್ಟೇ ಕಷ್ಟಪಡಲು ದುಡಿಯಲು ಕೂಡ ನಾವು ತಯಾರಿದ್ದೇವೆ . ಆದರೆ ಸರಳವಾಗಿ ಬದುಕುವುದು ಯಾರಿಗೂ ಬೇಡ .
ಸರಳತೆಯೆನ್ನುವುದು ಒಂದು ರೀತಿಯ ಆತಂಕವಾಗಿ ನಮ್ಮನ್ನು ಕಾಡುತ್ತಿದೆ .
ನಿಜವಾಗಿಯೂ ಸರಳತೆ ಎಂಬುದು ಯಾವ  ಅವಗುಣವೂ  , ದುಃಸ್ವಪ್ನವೂ ಅಲ್ಲ ಅದು ಬದುಕಿನ ನೆಮ್ಮದಿಯ ಚಿಲುಮೆಯನ್ನು ಹೆಚ್ಚಿಸುವ ವಿಧಾನ .  ಅನೇಕರು ಸರಳತೆಯಿಂದರೇ ಲೌಕಿಕ ಸುಖದೊಂದಿಗೆ ಮಾಡಿಕೊಳ್ಳುವ ರಾಜಿ ಎಂದುಕೊಂಡಿದ್ದಾರೆ .
ಆದರೆ ಹಾಗಲ್ಲ ಲೌಕಿಕ ಜೀವನವನ್ನು ನಡೆಸುತ್ತಾ, ಬದುಕಿ ಬದುಕಲು ಬಿಡಿ ಎನ್ನುವಂತೆ ಜೀವಿಸುವುದು.
ಆದರೆ ಮಾನವನಿಗೆ ಆಢಂಬರತೆಯಲ್ಲಿ ಹೆಚ್ಚು ಆಸಕ್ತಿ. ಸಂಪನ್ಮೂಲವನ್ನು ಹೆಚ್ಚಾಗಿ ಬಳಸುವುದು, ಹಣವನ್ನು ನೀರಿನಂತೆ ಪೋಲು ಮಾಡುವುದು, ವಿದೇಶಿ ಸಂಸ್ಕೃತಿಯ ದುಂಬಾಲು ಬೀಳುವುದು ಇವೆಲ್ಲವೂ ಉತ್ಕೃಷ್ಟ ಜೀವನದ ಪ್ರತೀಕ ಎಂದು ನಂಬುತ್ತಾರೆ.
ಆದ್ದರಿಂದಲೇ ಏನೋ ಪ್ರಸ್ತುತ ಜೀವನವಿಧಾನ ಟೊಳ್ಳು ಎನಿಸತೋಡಗಿದೆ . ಒಂದು ಕಡೆ ತೀರಾ ಬಡತನ, ಅಸಹಾಯಕತೆ ಮತ್ತೊಂದು ಕಡೆ ಅತಿ ಶ್ರೀಮಂತ ತನ, ಬೇಕಾಬಿಟ್ಟಿ ಖರ್ಚು .   ಸಮಾನತೆಯ ತತ್ವ ಭಾಷಣಕ್ಕೆ ಮಾತ್ರ ಸೀಮಿತ ಎಂಬಂತೆ.
ಜಗತ್ತಿನ ಮುಂದೆ ನಾನು ಶ್ರೀಮಂತ ಎಂದು ತೋರಿಸಿಕೊಳ್ಳುವ ಹಪಹಪಿ .
ಸರಳತೆಯ  ಅಭಿವ್ಯಕ್ತಿಗೆ  ಪ್ರಕೃತಿಗಿಂತಲೂ ಉತ್ತಮವಾದ ಉದಾಹರಣೆ ಮತ್ತೊಂದಿಲ್ಲ ಹರಿವ ನೀರು ,ಮರ-ಗಿಡ, ಹೊಂಬಿಸಿಲು, ಸೂರ್ಯ-ಚಂದ್ರ, ಬೆಳದಿಂಗಳು ಯಾವುದರಲ್ಲಿಯೂ ಆಢಂಬರವಿಲ್ಲ ಆದರೂ ಅವು ವಿಶೇಷವಲ್ಲವೇ .
ಪ್ರಕೃತಿ  ಆದೇಶವಿರಲಿ ನಮ್ಮ ಹಿರಿಯರ ಆದರ್ಶವನ್ನಾದರೂ ಪಾಲಿಸುವವರ ಸಂಖ್ಯೆ ಎಷ್ಟಿದೆ?  ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ ತತ್ವವನ್ನು ನಾವು ಯಾವ ರೀತಿಯ ಅರ್ಥೈಸಿಕೊಳ್ಳುತ್ತಿದ್ದೇವೆ ,ಯಾವ ರೀತಿಯಲ್ಲಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ, ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.
ಸರಳತೆಯಿಂದಲೇ ಶ್ರೇಷ್ಠತೆಯನ್ನು ಸಂಪಾದಿಸಿದವರೆ ಗಾಂಧಿ ಅವರ ತತ್ವಗಳನ್ನು ಪಾಲಿಸಲು ಎಷ್ಟು ಜನ ತಾನೆ  ಇಷ್ಟಪಡುತ್ತಾರೆ.
ಪರರಿಗೆ ಸಲ್ಲಬೇಕಾದ ಸಂಪತ್ತನ್ನು ಕಸಿದು ಕೊಳ್ಳಬೇಡ ಇಷ್ಟಕ್ಕೂ ಇದು ಯಾರ ಸ್ವತ್ತು? ಎಂಬ ಗಾಂಧಿಯ ಸರಳ ತತ್ವವನ್ನು ಅನುಸರಿಸಿ ಬದುಕಬೇಕಿದೆ .
ಸಾವಯವ ಸಹಜಕೃಷಿ, ಸರಳ ಬದುಕು, ಪರಿಸರ ಸಂರಕ್ಷಣೆ, ಮಾನವೀಯ ಮೌಲ್ಯಗಳು ಕಂಪ್ಯೂಟರ್, ಮೊಬೈಲ್ ,ಜಾಲತಾಣ, ಡಿಜಿಟಲೀಕರಣ,  ಹೈ-ಟೆಕ್, ಬದುಕಿನ ಮುಂದೆ ಸಪ್ಪೆಯಾಗಿದೆ. ಆಧುನಿಕ ಬದುಕು, ಫ್ಯಾಷನ್, ಪ್ರಗತಿ  ಎನ್ನುವವರಿಗೆ ಸರಳ ಬದುಕು ಎಂಬ ಪದವೇ ಹಾಸ್ಯಸ್ಪದವಾಗಿ ಕಾಣಬಹುದು .  ಬುಧ್ಧ ,ಮದರ್ ತೆರೇಸಾ , ಸ್ವಾಮಿ ವಿವೇಕಾನಂದ , ಗಾಂಧಿ ಇವರ ತತ್ವವನ್ನು ಅನುಸರಿಸಿ ಬದುಕುವುದು ಈಗೀನ ದಿನಗಳಲ್ಲಿ ತೀರಾ ಅಗತ್ಯವಾದ ಸಂಗತಿ . ಯಾರನ್ನೋ ಮೆಚ್ಚಿಸಲು ಪ್ರತಿದಿನದ ಹೆಣಗಾಟ, ಮಲಿನ ನೀರು ಗಾಳಿ ಸೇರಿಸುತ್ತಾ ಬದುಕನ್ನು ಮಲಿನಗೊಳಿಸಿ ಕೊಳ್ಳುವುದು ಬೇಡ.  ಸಂಪತ್ತಿಗೆ ತಕ್ಕಂತೆ ನಮ್ಮ ಬಯಕೆಗಳನ್ನು ಮಿತಗೊಳಿಸಿದರೆ ಅಷ್ಟೇ ಸಾಕು ಸರಳತೆಯನ್ನು ಮೈಗೂಡಿಸಿಕೊಳ್ಳ ಬಹುದು.  ವೇಗದ ಓಟ ದಂತಹ ಬದುಕಿನಲ್ಲಿ ತಾಮುಂದು, ನಾಮುಂದು ಎಂದು ಓಡುವ ಭರದಲ್ಲಿ ಜೀವನದ ಸತ್ವವನ್ನು ನೆಮ್ಮದಿಯನ್ನು ಕಳೆದುಕೊಳ್ಳುವುದು ಬೇಡ .
ವೇದಶ್ರಿ
SDM ujire
Swathi MG

Recent Posts

ಸಿಎಂ ಸಿದ್ದು ತವರು ಕ್ಷೇತ್ರದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..!

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ…

8 mins ago

ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಾಸ: ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ಧಾರವಾಡ ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ, ಕ್ರಮವಹಿಸಲು ಸೂಚಿಸಲಾಗಿದ್ದರೂ ತಾಂತ್ರಿಕ ಸಮಸ್ಯೆ,…

11 mins ago

ಮನೆಯ ಗೇಟ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಮನೆಯ ಗೇಟ್ ಮುಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಮುದ್ರುಮಕ್ಕಿ…

26 mins ago

ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್

ಐತಿಹಾಸಿಕ ಕಥೆಯ ʻಹಲಗಲಿʼ ಸಿನಿಮಾಗೆ ನಟ ಡಾಲಿ ಧನಂಜಯ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. 'ಕೃಷ್ಣ ತುಳಸಿ' ಚಿತ್ರದ ಖ್ಯಾತ ಡೈರೆಕ್ಟರ್‌ ಸುಕೇಶ್‌…

27 mins ago

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ವೇಳೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಪ್ರಯಾಣಿಕ!

ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಚೆಕ್ ಇನ್ ಮಾಡುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಘಟನೆ…

32 mins ago

ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ

ಇತ್ತೀಚೆಗೆ ದೇಶದಾದ್ಯಂತ ಬಾಂಬ್‌ ಬೆದರಿಕೆ ಕೇಳಿಬರುತ್ತವೆ ಇದರ ಹಿಂದೆ ಯಾರ ಕೈಚಳಕವಿದೆ ಎಂದು ಇನ್ನು ಬೆಳಕಿಗೆ ಬಂದಿಲ್ಲ. ಈಗಾಗಲೇ ಶಾಲೆಗಳಿಗ,…

43 mins ago