ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು 2020-21ರ ಜೆಇಇ ಪ್ರವೇಶ ಪರೀಕ್ಷೆಯ ನಾಟಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಪುತ್ತೂರಿನ ದರ್ಭೆ ನಿವಾಸಿಗಳಾದ ನವೀನ್ ಕುಮಾರ್ ಕೆ.ಎಸ್ ಹಾಗೂ ಬೃಂದಾ ಕೆ.ಎಂ ದಂಪತಿ ಪುತ್ರ ವಿಶಾಖ್ ನವೀನ್ ಕೆ 190ನೇ ರಾಂಕ್ ಗಳಿಸಿ, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪುತ್ತೂರಿನ ನೆಕ್ಕಿಲಾಡಿ ಸಮೀಪದ ಶಾಂತಿನಗರ ನಿವಾಸಿಗಳಾದ ಲೋಕನಾಥ ಶೆಟ್ಟಿ ಹಾಗೂ ಜಯಶೀಲಾ ಶೆಟ್ಟಿ ದಂಪತಿ ಪುತ್ರ ನಿತೀಶ್ ಶೆಟ್ಟಿ 484ನೇ ರಾಂಕ್ ಗಳಿಸಿದ್ದಾರೆ. ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಂಬಾಡಿಯವರಾದ ರಾಜಗೋಪಾಲ ರೈ ಹಾಗೂ ಸುಜಾತಾ ರೈ ದಂಪತಿ ಪುತ್ರ ಶ್ರೀಶ ರೈ 545ನೇ ರಾಂಕ್ ಗಳಿಸಿದ್ದಾರೆ.
ಅOತೆಯೇ ಸುಳ್ಯದ ಪಂಜ ನಿವಾಸಿಗಳಾದ ದೇವರಾಜ್ ಜಾಕೆ ಮತ್ತು ಪಾರ್ವತಿ ಜಾಕೆ ದಂಪತಿ ಪುತ್ರ ಚಿನ್ಮಯ ಜಾಕೆ 694ನೇ ರಾಂಕ್ ಗಳಿಸಿದ್ದಾರೆ ಹಾಗೂ ಕೊಡಗಿನ ಸೋಮವಾರ ಪೇಟೆಯ ಜಗದೀಶ್ ಬಿ.ಎಂ ಹಾಗೂ ನಂದಿನಿ ಬಿ.ಜೆ ದಂಪತಿ ಪುತ್ರ ಅಂಕಿತ್ ಬಿ ಜೆ 982ನೇ ರಾಂಕ್ ಗಳಿಸಿದ್ದಾರೆ. ನಾಟಾ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಅಭಿನಂದಿಸಿದ್ದಾರೆ.
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…
ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…
ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…
ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…
ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…