ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ ಅಹಮದ್ ಅವರನ್ನ ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಬಿ.ಕೆ ಹರಿಪ್ರಸಾದ್ ಅವರು ಸಲೀಂ ಅಹಮದ್ ಅವರ ಹೆಸರನ್ನು ಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದರು. ಈ ಮಧ್ಯೆ ಪೂಜಾರ್ ಪರವಾಗಿ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪ ಮಂಡನೆ ಮಾಡಿದರು.
ಭೋಜೇಗೌಡರು ಹಾಗೂ ಸಂಕನೂರು, ಹನುಮಂತ ನಿರಾಣಿ ಅವರು ಪೂಜಾರ್ ಹೆಸರು ಅನುಮೋದಿಸಿದರು. ಆದ್ರೆ ಚುನಾವಣೆಯಲ್ಲಿ ಅಂತಿಮವಾಗಿ ಸಲೀಂ ಅಹಮದ್ ಅವರನ್ನ ಆಯ್ಕೆ ಮಾಡಲಾಯಿತು.
ಸಂಪ್ರದಾಯದಂತೆ ವಿಪಕ್ಷ ನಾಯಕರು ಹಾಗೂ ಸಭಾ ನಾಯಕ ಸಲೀಂ ಅಹಮದ್ ಅವರನ್ನ ಸಭಾಪತಿ ಪೀಠದತ್ತ ಕರೆತಂದು ಕೂರಿಸಿದರು. ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಸಲೀಂ ಅಹ್ಮದ್ ಎಲ್ಲರಿಗೂ ಧನ್ಯವಾದ ಹೇಳಿದರು.

