ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅತ್ತ​ ಬಳ್ಳಾರಿ ಜೈಲಿಗೆ ಶಿಫ್ಟ್ ಆದರೆ ಇತ್ತ ನಟ ಚಿಕ್ಕಣ್ಣ ವಿಚಾರಣೆ ಹಾಜರಾಗಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ನಟ ಚಿಕ್ಕಣ್ಣ ವಿಚಾರಣೆ ನಡೆಯುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ‌ಚಿಕ್ಕಣ್ಣನ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಸೆಕ್ಷನ್​ 164ರ ಅಡಿ ಚಿಕ್ಕಣ್ಣನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಅದಾದ ಬಳಿಕ ಜೈಲಿನಲ್ಲಿದ್ದ ದರ್ಶನ್​ರನ್ನು ಚಿಕ್ಕಣ್ಣ ​ ಭೇಟಿ ಮಾಡಿದ್ದರು. ಚಿಕ್ಕಣ್ಣ ದರ್ಶನ್​ ​ ಭೇಟಿ ಮಾಡಿದ ಹಿನ್ನೆಲೆ ತನಿಖಾಧಿಕಾರಿ ಎಸಿಪಿ ಚಂದನ್ ನೋಟಿಸ್ ನೀಡಿದ್ದಾರೆ. ನೋಟಿಸ್ ಹಿನ್ನೆಲೆ ನಟ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದಾರೆ.

ತಡರಾತ್ರಿ ಚಿಕ್ಕಣನಿಗೆ ಎಸಿಪಿ ಚಂದನ್ ನೋಟಿಸ್ ನೋಟೀಸ್ ಜಾರಿ ಮಾಡಿದ್ರು. ನೋಟೀಸ್ ಹಿನ್ನೆಲೆ ನಟ ಚಿಕ್ಕಣ್ಣ ಇಂದು ಮತ್ತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಎಸಿಪಿ ಮುಂದೆ ಹಾಜರಾಗಿದ್ದಾರೆ.