ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಸುರಕ್ಷಿತವಾಗಿ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾರೆ.
9.45ರ ವೇಳೆಗೆ ಬಳ್ಳಾರಿಗೆ ತಲುಪಿಸಿದ ದರ್ಶನ್ ಇದೀಗ ಕೇಂದ್ರ ಕಾರಾಗೃಹದ ಒಳ ಸೇರಿದ್ದಾರೆ. ಸದ್ಯ ನಟನಿಗೆ ಹೊಸ ಕೈದಿ ನಂಬರ್ ಕೂಡ ಜೈಲಾಧಿಕಾರಿಗಳು ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್ಗೆ ಜೈಲಾಧಿಕಾರಿಗಳಿಂದ ಕೈದಿ ನಂಬರ್ 6106 ನೀಡಿದ್ದರು.
ಆದರೀಗ ಬಳ್ಳಾರಿಗೆ ಶಿಫ್ಟ್ ಆದ ಬಳಿಕ ಬೇರೆ ನಂಬರ್ ನೀಡಿದ್ದಾರೆ. ಬಳ್ಳಾರಿ ಜೈಲು ಸೇರಿದ ದರ್ಶನ್ಗೆ ಕೈದಿ ನಂಬರ್ 511 ನೀಡಿದ್ದಾರೆ. ಸದ್ಯ ಹೊಸ ನಂಬರ್ ದರ್ಶನ್ಗೆ ಸಿಕ್ಕಿದೆ. ಮೊದಲಿಗೆ 6106 ನಂಬರ್ ಸಿಕ್ಕಿದಾಗ ನಟನ ಅಭಿಮಾನಿಗಳು ಆ ನಂಬರನ್ನು ವಾಹನದ ಮೇಲೆ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದರು. ಆದರೀಗ ಮತ್ತೇ ನಂಬರ್ ಬದಲಾಗಿದೆ.

