News Karnataka Kannada
Wednesday, May 01 2024
ವಿದೇಶ

ಸಿಂಗಾಪುರ ಅಧ್ಯಕ್ಷರಾಗಿ ಥರ್ಮನ್ ಆಯ್ಕೆಯಾದ ಬಳಿಕ ಅನಾನಸ್‌ಗೆ ಬಹುಬೇಡಿಕೆ

Pineapple sought-after after Shanmugaratnam elected Singapore's president
Photo Credit : IANS

ಸಿಂಗಾಪುರ: ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ತಮಿಳು ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಅನಾನಸ್‌ ಅನ್ನು ಅಧ್ಯಕ್ಷೀಯ ಚುನಾವಣೆಯ ಚಿಹ್ನೆಯಾಗಿ ಬಳಸಿಕೊಂಡಿದ್ದರು.

ಥರ್ಮನ್‌ ಸಿಂಗಾಪುರ ಅಧ್ಯಕ್ಷೀಯ ಹುದ್ದೆ ಚುನಾವಣೆಯಲ್ಲಿ ಗೆದ್ದಿದ್ದು, ಈ ಬಳಿಕ ಸಿಂಗಾಪುರದಲ್ಲಿ ಅನಾನಸ್ ಕೇಕ್‌ಗಳ ಮಾರಾಟ ಹೆಚ್ಚಾಗಿದೆ. ಅದೇ ರೀತಿ ಹಣ್ಣಿನ ಅಂಗಡಿಗಳಲ್ಲಿ ಅನಾನಸ್‌ (ಪೈನಾಪಲ್‌) ವ್ಯಾಪಾರವೂ ಜೋರಾಗಿದೆ, ಅನಾನಸ್ ಮಾರಾಟವು ಈ ಹಿಂದಿನ ತಿಂಗಳಿಗಿಂತ ಆಗಸ್ಟ್‌ನಲ್ಲಿ ಶೇಕಡಾ 10 ರಿಂದ 15 ರಷ್ಟು ಏರಿಕೆಯಾಗಿದೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ಅಲ್ಲದೆ ಷಣ್ಮುಗಂ ಅವರ ಗೆಲುವನ್ನು ಆಚರಿಸಲು ಬೇಕರಿ, ಮತ್ತು ಅಂಗಡಿಗಳು ಅನಾನಸ್ ಸಂಬಂಧಿತ ಉತ್ಪನ್ನಗಳನ್ನು ಹೊರತರುತ್ತಿವೆ, ಅಲ್ಲದೆ ಹಲವು ಆಫರ್‌ಗಳನ್ನು ನೀಡುತ್ತಿವೆ. ಕೆಫೆ ಮಾಲೀಕ ಸೆಲಿನ್ ಎನ್‌ಜಿ, ಸಾಮಾನ್ಯವಾಗಿ ಪ್ರತಿದಿನ ಎರಡು ಅಥವಾ ಮೂರು ಅನಾನಸ್ ಚೀಸ್‌ಕೇಕ್‌ಗಳನ್ನು ಮಾರಾಟ ಮಾಡುತ್ತಿದ್ದರು.

ಥರ್ಮನ್ ಅವರ ಗೆಲುವಿನ ಬಳಿಕ ದಿನಕ್ಕೆ 30 ಆರ್ಡರ್‌ ಬರುತ್ತಿದೆ ಎಂದು ಹೇಳಿದ್ದಾರೆ. ಅಪ್ಪರ್ ಥಾಮ್ಸನ್ ರಸ್ತೆಯಲ್ಲಿರುವ ಕ್ಯಾಸುವಾರಿನಾ ಅಂಗಡಿಥರ್ಮನ್ ಅವರ ಗೆಲುವನ್ನು ಆಚರಿಸಲು ಸೆಪ್ಟೆಂಬರ್ 9 ರವರೆಗೆ ಅನಾನಸ್ ಚೀಸ್ ಪ್ರಾಟಾವನ್ನು ಅರ್ಧ ಬೆಲೆಗೆ ನೀಡುತ್ತಿದೆ. ನಾನು ಥರ್ಮನ್ ಅವರ ಗೆಲುವಿನ ಸಂಭ್ರಮದ ಕಾರಣ ತಿನಿಸುಗಳ ಬೆಲೆಯನ್ನು ಅರ್ಧಕ್ಕೆ ಇಳಿಸಿದ್ದೇನೆ ಎಂದು ಎಲಾಂಗೋ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು