ನವದೆಹಲಿ: “ಆಪರೇಶನ್ ಅಜಯ್” ಮೂಲಕ ನೇಪಾಳದ 18 ನಾಗರಿಕರು ಸೇರಿದಂತೆ 286 ಭಾರತೀಯ ಪ್ರಜೆಗಳನ್ನು ಹೊತ್ತ 5ನೇ ವಿಮಾನ ಮಂಗಳವಾರ ತಡರಾತ್ರಿ ನವದೆಹಲಿಗೆ ಆಗಮಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಲ್ ಮುರುಗನ್ ಅವರು ಭಾರತೀಯರನ್ನು ಬರಮಾಡಿಕೊಂಡರು.
“ಭಾರತೀಯರು ಎಲ್ಲೆಲ್ಲಿ ಸಿಕ್ಕಿಹಾಕಿಕೊಂಡಿದ್ದಾರೋ, ಅವರನ್ನು ಮರಳಿ ಕರೆತರುವುದು ನಮ್ಮ ಆದ್ಯತೆಯಾಗಿದೆ. ನಾವು ಆಪರೇಷನ್ ಗಂಗಾ ಮತ್ತು ಆಪರೇಷನ್ ಕಾವೇರಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ, ಈಗ ನಾವು ಆಪರೇಷನ್ ಅಜಯ್ ಅಡಿಯಲ್ಲಿ ನಾವು ಜನರನ್ನು ಇಸ್ರೇಲ್ನಿಂದ ಮರಳಿ ಕರೆತರುತ್ತಿದ್ದೇವೆ. ಇದು ಐದನೇ ವಿಮಾನವಾಗಿದೆ ಮತ್ತು ನಾವು ಈಗಾಗಲೇ 1180 ಜನರನ್ನು ಮನೆಗೆ ಕರೆತಂದಿದ್ದೇವೆ ಎಂದರು.
ನಾಗರಿಕರನ್ನು ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಿದ ಮೊದಲ ದೇಶ ನಾವು, ಮತ್ತು ನಾವು ನಮ್ಮ ನೆರೆಯ (ನೇಪಾಳ) ದೇಶಗಳಿಗೆ ಸೇರಿದ ಜನರನ್ನು ಸಹ ಕರೆತರುತ್ತಿದ್ದೇವೆ ಎಂದು ಅವರು ತಿಳಿಸಿದರು.