News Karnataka Kannada
Tuesday, April 30 2024
ವಿದೇಶ

ಆಪರೇಶನ್‌ ಅಜಯ್: ಭಾರತೀಯರನ್ನು ಹೊತ್ತು ಇಸ್ರೇಲ್‌ನಿಂದ ದೆಹಲಿಗೆ ಬಂದ ವಿಮಾನ

Operation Ajay: Flight carrying Indians from Israel to Delhi
Photo Credit : Twitter

ನವದೆಹಲಿ: “ಆಪರೇಶನ್‌ ಅಜಯ್” ಮೂಲಕ ನೇಪಾಳದ 18 ನಾಗರಿಕರು ಸೇರಿದಂತೆ 286 ಭಾರತೀಯ ಪ್ರಜೆಗಳನ್ನು ಹೊತ್ತ 5ನೇ ವಿಮಾನ ಮಂಗಳವಾರ ತಡರಾತ್ರಿ ನವದೆಹಲಿಗೆ ಆಗಮಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಲ್ ಮುರುಗನ್ ಅವರು ಭಾರತೀಯರನ್ನು ಬರಮಾಡಿಕೊಂಡರು.

“ಭಾರತೀಯರು ಎಲ್ಲೆಲ್ಲಿ ಸಿಕ್ಕಿಹಾಕಿಕೊಂಡಿದ್ದಾರೋ, ಅವರನ್ನು ಮರಳಿ ಕರೆತರುವುದು ನಮ್ಮ ಆದ್ಯತೆಯಾಗಿದೆ. ನಾವು ಆಪರೇಷನ್ ಗಂಗಾ ಮತ್ತು ಆಪರೇಷನ್ ಕಾವೇರಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ, ಈಗ ನಾವು ಆಪರೇಷನ್ ಅಜಯ್ ಅಡಿಯಲ್ಲಿ ನಾವು ಜನರನ್ನು ಇಸ್ರೇಲ್‌ನಿಂದ ಮರಳಿ ಕರೆತರುತ್ತಿದ್ದೇವೆ. ಇದು ಐದನೇ ವಿಮಾನವಾಗಿದೆ ಮತ್ತು ನಾವು ಈಗಾಗಲೇ 1180 ಜನರನ್ನು ಮನೆಗೆ ಕರೆತಂದಿದ್ದೇವೆ ಎಂದರು.

ನಾಗರಿಕರನ್ನು ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಿದ ಮೊದಲ ದೇಶ ನಾವು, ಮತ್ತು ನಾವು ನಮ್ಮ ನೆರೆಯ (ನೇಪಾಳ) ದೇಶಗಳಿಗೆ ಸೇರಿದ ಜನರನ್ನು ಸಹ ಕರೆತರುತ್ತಿದ್ದೇವೆ ಎಂದು ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು