Categories: ವಿದೇಶ

ಪ್ರಶ್ನೆ ಕೇಳಿದ ಪತ್ರಕರ್ತೆ ಮುಖದ ಮೇಲೆ ಉಗಿದ ನವಾಜ್‌ ಷರೀಫ್‌ ಚಾಲಕ

ಲಂಡನ್‌: ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿರುವ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾಕ್‌ ಮಾಜಿ ಪ್ರಧಾನಿಯ ಕಾರನ್ನು ಸಮೀಪಿಸುತ್ತಾರೆ. ಅಲ್ಲದೆ ತಾವು ಮಾತನಾಡುವುದನ್ನು ರೆಕಾರ್ಡ್‌ ಮಾಡುತ್ತಾ ನವಾಜ್‌ ಶರೀಫ್‌ ಅವರನ್ನು ಉಲ್ಲೇಖಿಸಿ ನವಾಜ್ ಷರೀಫ್ ಭ್ರಷ್ಟರೇ ಎಂದು ಪ್ರಶ್ನಿಸುತ್ತಾರೆ. “ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ರಾಜಕಾರಣಿ ಎಂದು ನಾನು ಕೇಳಿದ್ದೇನೆ, ಎಂದು ಹೇಳುತ್ತಾರೆ.

ಈ ವೇಳೆ ಡ್ರೈವರ್ ಕಾರಿನ ಕಿಟಕಿ ತೆರೆದುಕೊಂಡಿದ್ದು ಮಹಿಳೆ ಮತ್ತೊಮ್ಮೆ ಅದೇ ರೀತಿ ಹೇಳುತ್ತಾರೆ. ಈ ಕಾಮೆಂಟ್‌ನಿಂದ ಕೋಪಗೊಂಡ ಷರೀಫ್‌ ಕಾರಿನ ಚಾಲಕ ಆಕೆಯ ಮುಖದ ಮೇಲೆ ಉಗುಳಿ, ಕಿಟಕಿಯನ್ನು ಮತ್ತೇ ಮೇಲೆಳೆದುಕೊಳ್ಳುತ್ತಾನೆ. ಈ ಆಘಾತಕಾರಿ ಘಟನೆಯ ವಿಡಿಯೋವನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿಯ ಸದಸ್ಯೆ ಡಾ.ಫಾತಿಮಾ ಕೆ, ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೆ ವೀಡಿಯೊದಲ್ಲಿರುವ ಮಹಿಳೆ ಪತ್ರಕರ್ತೆ ಎಂದು ಉಲ್ಲೇಖಿಸಿದ್ದಾರೆ. ”ಪ್ರಶ್ನೆ ಕೇಳಿದ ಪತ್ರಕರ್ತನ ಮುಖದ ಮೇಲೆ ನವಾಜ್ ಷರೀಫ್ ಚಾಲಕ ಉಗುಳಿದ್ದಾನೆ! ಉದಾರವಾದಿಗಳು, ಬುದ್ಧಿಜೀವಿಗಳು ಅಥವಾ ಸ್ತ್ರೀವಾದಿಗಳು ಯಾರೂ ಇದರ ವಿರುದ್ಧ ಮಾತನಾಡುವುದಿಲ್ಲ. ಈ ಆಯ್ದ ನೈತಿಕತೆಯ ಕಾಯಿಲೆ ಅಸಹ್ಯಕರ ಎಂದು ಬರೆದುಕೊಂಡಿದ್ದಾರೆ.

ಈ ಘಟನೆ ಬಗ್ಗೆ ಇಂಟರ್ನೆಟ್ ಬಳಕೆದಾರರು ಕೋಪದಿಂದ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಬಳಕೆದಾರ, ”ಅವನು ಕೇವಲ ಭ್ರಷ್ಟನಲ್ಲ, ದೆವ್ವ ಕೂಡ ಎಂದು ಸಾಬೀತುಪಡಿಸಿದ್ದಾನೆ ಎಂದು ಬರೆದಿದ್ದಾರೆ. ಇದೇ ರೀತಿ ಹಲವಾರು ಕಮೆಂಟ್‌ಗಳು ಬಂದಿವೆ.
ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿಯಾಗಿರುವ ಷರೀಫ್ ಅವರು ವೈದ್ಯಕೀಯ ಚಿಕಿತ್ಸೆಗಾಗಿ ನವೆಂಬರ್ 2019 ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

Gayathri SG

Recent Posts

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

6 hours ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

7 hours ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

7 hours ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

7 hours ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

7 hours ago

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು?

ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ…

8 hours ago