ಪಾಕಿಸ್ತಾನ: ಕರಾಚಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು ತನ್ನ ಗೆಳತಿಯ ಬರ್ಗರ್ ತಿಂದ ಎಂಬುದಕ್ಕೆ ಸ್ನೇಹಿತನನ್ನೆ ಕೊಂದಿದ್ದಾನೆ ಎಂದು ಎಆರ್ವೈ ನ್ಯೂಸ್ ವರದಿ ತಿಳಿಸಿದೆ.
ವರದಿಯ ಪ್ರಕಾರ, ಬಲಿಪಶುವನ್ನು ಸೆಷನ್ಸ್ ನ್ಯಾಯಾಧೀಶರ ಮಗ ಅಲಿ ಕೆರಿಯೊ ಎಂದು ಗುರುತಿಸಲಾಗಿದ್ದು, ಆರೋಪಿಯ ಗೆಳತಿಯ ಬರ್ಗರ್ ಅನ್ನು ಉದ್ದೇಶಪೂರ್ವಕವಾಗಿ ಸೇವಿಸಿದಾಗ ಸಂಘರ್ಷ ಭುಗಿಲೆದ್ದಿದೆ. ಆರೋಪಿ ದಾನಿಯಾಲ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ನಜೀರ್ ಅಹ್ಮದ್ ಮಿರ್ಬಹರ್ ಅವರ ಪುತ್ರ ಎಂದು ವರದಿಯಲ್ಲಿ ತಿಳಿಸಿದೆ.
ಡೇನಿಯಲ್ ತನ್ನ ಗೆಳತಿ ಶಾಜಿಯಾಳನ್ನು ಪಾರ್ಟಿಗೆಂದು ತನ್ನ ನಿವಾಸಕ್ಕೆ ಆಹ್ವಾನಿಸಿದ್ದನೆಂದು ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರ ಸ್ನೇಹಿತ ಅಲಿ ಕೆರಿಯೊ ಮತ್ತು ಅವರ ಸಹೋದರ ಅಹ್ಮರ್ ಕೂಡ ಉಪಸ್ಥಿತರಿದ್ದರು.
ಆರೋಪಿ ತನಗೆ ಮತ್ತು ಶಾಜಿಯಾಗೆ ಎರಡು ಬರ್ಗರ್ ಆರ್ಡರ್ ಮಾಡಿದ್ದ. ಆದಾಗ್ಯೂ, ಕೀರಿಯೊ ಬರ್ಗರ್ಗಳ ಒಂದು ಭಾಗವನ್ನು ಸೇವಿಸಿದಾಗ ವಿವಾದವು ಹುಟ್ಟಿಕೊಂಡಿತು, ಇದು ಡೇನಿಯಲ್ನಿಂದ ಉಗ್ರ ಪ್ರತಿಕ್ರಿಯೆಯನ್ನು ಉಂಟುಮಾಡಿತು. ಬಳಿಕ ಆರೋಪಿ ಡೇನಿಯಲ್ ಸೆಕ್ಯುರಿಟಿ ಗಾರ್ಡ್ನ ರೈಫಲ್ ತೆಗೆದು ಕೀರಿಯೊಗೆ ಗುಂಡು ಹಾರಿಸಿದ್ದಾನೆ ಇದರಿಂದ ಗಂಭೀರವಾಗಿ ಗಾಯಗೊಂಡ ಕಿರಿಯೋ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನಪ್ಪಿದ್ದಾನೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…