ಕೀವ್: ರಷ್ಯಾ ಆಕ್ರಮಿತ ಜಪೋರಿಝ್ಯಾ ಪರಮಾಣು ಸ್ಥಾವರದಿಂದ ಅನತಿ ದೂರದಲ್ಲಿರುವ ಉಕ್ರೇನ್ ನ ದ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಿಲಿಟರಿ ಬುಧವಾರ ತಿಳಿಸಿದೆ.
“ನಿಕೋಪೋಲ್ ಪ್ರದೇಶದಲ್ಲಿ ರಷ್ಯಾದ ಸೇನೆಯು 11 ಜನರನ್ನು ಕೊಂದು 13 ಜನರನ್ನು ಗಾಯಗೊಳಿಸಿದೆ” ಎಂದು ಡ್ನಿಪ್ರೊಪೆಟ್ರೋವ್ಸ್ಕ್ ಮಿಲಿಟರಿ ಆಡಳಿತದ ಮುಖ್ಯಸ್ಥ ವ್ಯಾಲೆಂಟೈನ್ ರೆಜ್ನಿಚೆಂಕೊ ತಿಳಿಸಿದ್ದಾರೆ.
ಈ ಎರಡೂ ಪೀಡಿತ ಪ್ರದೇಶಗಳು ಡ್ನಿಪ್ರೊ ನದಿಯ ವಿರುದ್ಧ ದಂಡೆಯಲ್ಲಿದ್ದು, ಜಪೋರಿಜ್ಝ್ಯಾ ಪರಮಾಣು ಸ್ಥಾವರಕ್ಕೆ ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಶೆಲ್ ದಾಳಿ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮಾರ್ಹಾನೆಟ್ಸ್ ಎಂಬ ಸಣ್ಣ ಪಟ್ಟಣವು ಹೆಚ್ಚು ಹಾನಿಗೊಳಗಾಗಿದ್ದು, ಎರಡು ಶಾಲೆಗಳು, ಒಂದು ವಸತಿ ನಿಲಯ ಮತ್ತು ಸಾಂಸ್ಕೃತಿಕ ಕೇಂದ್ರ ಸೇರಿದಂತೆ 20 ಬಹುಮಹಡಿ ಕಟ್ಟಡಗಳು ಹಾನಿಗೀಡಾಗಿವೆ ಎಂದು ರೆಜ್ನಿಚೆಂಕೊ ಹೇಳಿದರು.
ಪಟ್ಟಣದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ 11 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆಎಂದು ಅವರು ಹೇಳಿದರು.
ನಿಕೋಪೋಲ್ ನಗರಕ್ಕೆ ಸಮೀಪದ ಮತ್ತೊಂದು ಹಳ್ಳಿಯಲ್ಲಿ, ದಾಳಿಯ ಪರಿಣಾಮವಾಗಿ ಇನ್ನೊಬ್ಬ ಮಹಿಳೆ ತನ್ನ ಮನೆಯಲ್ಲಿಯೇ ಸಾವನ್ನಪ್ಪಿದಳು ಮತ್ತು ದಂಪತಿಗಳು ಗಾಯಗೊಂಡರು. ಈ ಎರಡು ಗ್ರಾಮಗಳು ಡ್ನಿಪ್ರೊ ನದಿಯ ಕಖೋವ್ಕಾ ಜಲಾಶಯದ ಉತ್ತರ ದಂಡೆಯ ಮೇಲಿದೆ.
ದಕ್ಷಿಣ ಭಾಗದಲ್ಲಿ 20 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಪರಮಾಣು ಸ್ಥಾವರವು ಬೆಂಕಿಗೆ ಆಹುತಿಯಾಗಿದ್ದು, ಇದು ಅಂತರರಾಷ್ಟ್ರೀಯ ಸುರಕ್ಷತೆಯ ಭೀತಿಯನ್ನು ಹುಟ್ಟುಹಾಕಿದೆ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…