Categories: ವಿದೇಶ

ಈ ಕಂಪನಿಯಲ್ಲಿ ಸತ್ತ ಪ್ರಾಣಿ ಕೀಟಗಳಿಗೂ ಸಿಗುತ್ತೆ ಶ್ರದ್ಧಾಂಜಲಿ

ಜಪಾನ್:  ಮನುಷ್ಯನ ಅಂತ್ಯ ಸಂಸ್ಕಾರದ ವೇಳೆ ಗೌರವಪೂರ್ವಕ ಶ್ರದ್ಧಾಂಜಲಿ ಸಿಗೋದು ಕಾಮನ್. ಆದ್ರೆ ಪ್ರಾಣಿ, ಕೀಟಗಳು ಕೂಡ ತಮ್ಮ ಜೀವವನ್ನು ಬಲಿದಾನ ಮಾಡುತ್ತವೆ ಎಂಬ ವಿಷ್ಯವನ್ನು ಕಂಪನಿಯೊಂದು ಅರಿತಿದೆ. ಕೀಟಗಳು ಸತ್ತಾಗ್ಲೂ ಮನುಷ್ಯರಿಗೆ ನೀಡುವಂತೆ ಶ್ರದ್ಧಾಂಜಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ.

ಅರ್ಥ್ ಫಾರ್ಮಾಸ್ಯುಟಿಕಲ್ ಎಂಬ ಜಪಾನ್ ಕಂಪನಿ ಮನೆಯಲ್ಲಿ ಬಳಸುವ ಕೀಟನಾಶಕವನ್ನು ಇದು ತಯಾರಿಸುತ್ತದೆ. ಜಪಾನಿನಲ್ಲಿ ಇದು ಪ್ರಸಿದ್ಧ ಕೀಟನಾಶಕ ಕಂಪನಿಯಾಗಿದೆ. ಕಂಪನಿ ತನ್ನ ಉತ್ಪನ್ನಗಳ ಪರಿಣಾಮಗಳನ್ನು ಪರೀಕ್ಷಿಸಲು ನಗರದಲ್ಲಿ ವಿವಿಧ ಜಾತಿಯ ಕೀಟಗಳನ್ನು ಬಳಸುತ್ತದೆ.  ಈ ಸಂಶೋಧನಾ ಪ್ರಕ್ರಿಯೆಯಲ್ಲಿ ಕೆಲವು ಕೀಟಗಳು ಸಾಯುತ್ತವೆ . ಇಂತಹ ಪರಿಸ್ಥಿತಿಯಲ್ಲಿ  ಅರ್ಥ್ ಫಾರ್ಮಾಸ್ಯುಟಿಕಲ್ ಕೀಟಗಳ ಸಾವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಅವುಗಳಿಗೆ ಧನ್ಯವಾದ ಹೇಳುವ ಸಲುವಾಗಿ ಎಕೋ ನಗರದ ಮಯೋಡೋಜಿ ದೇವಸ್ಥಾನದಲ್ಲಿ ಕೀಟಗಳನ್ನು ಗೌರವಿಸಲು ಸಮಾರಂಭ ಏರ್ಪಡಿಸಲಾಗುತ್ತದೆ. ಹಿಂದಿನ ತಿಂಗಳು ಕೂಡ ಕಂಪನಿ ಈ ಸಮಾರಂಭ ಏರ್ಪಡಿಸಿತ್ತು.

ಈ ಸಮಾರಂಭದಲ್ಲಿ ಟಾವೋ ಧರ್ಮದ ಪಾದ್ರಿ ದಾವೋಶಿ, ಸತ್ತ ಕೀಟಗಳ ಡಜನ್ ಗಟ್ಟಲೆ ಫೋಟೋಗಳ ಮುಂದೆ ಪ್ರಾರ್ಥನೆ ಸಲ್ಲಿಸಿದ್ರು.  ಇದರಲ್ಲಿ ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಹಾಕಲಾಗಿತ್ತು. ನಂತ್ರ ಅದರ ಮುಂದೆ ಪ್ರಾರ್ಥನೆ ಸಲ್ಲಿಸಲಾಯ್ತು.

ಅರ್ಥ್ ಫಾರ್ಮಾಸ್ಯುಟಿಕಲ್ ಇದೇ ಮೊದಲು ಈ ಸಮಾರಂಭ ನಡೆಸುತ್ತಿಲ್ಲ. ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಅರ್ಥ್ ಫಾರ್ಮಾಸ್ಯುಟಿಕಲ್ ರಿಸರ್ಚ್ ಮುಖ್ಯಸ್ಥ ಟೊಮಿಹಿರೊ ಕೊಬೊರಿ ಪ್ರಕಾರ,ಅರ್ಥ್ ಫಾರ್ಮಾಸ್ಯುಟಿಕಲ್, ತನ್ನ ಸಂಶೋಧನೆಗಾಗಿ ಸುಮಾರು 1 ಮಿಲಿಯನ್ ಜಿರಳೆಗಳನ್ನು ಮತ್ತು 100 ಮಿಲಿಯನ್‌ಗಿಂತಲೂ ಹೆಚ್ಚು ಕೀಟಗಳನ್ನು ಬಳಸಿಕೊಳ್ಳುತ್ತದೆ. ಮಾನವನ ಆರೋಗ್ಯ ಮತ್ತು ಅನುಕೂಲಕ್ಕೆ ಕೀಟಗಳು ತ್ಯಾಗ ಮಾಡುತ್ತವೆ ಎಂದು ಅವರು ಹೇಳುತ್ತಾರೆ.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

2 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

2 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

2 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

2 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

4 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

4 hours ago