Categories: ವಿದೇಶ

ವಿಮಾನ ಪತನಗೊಂಡು 40 ದಿನಗಳ ಬಳಿಕ ನಾಲ್ವರು ಮಕ್ಕಳ ರಕ್ಷಣೆ

ಬೊಗೋಟಾ: ಕೊಲಂಬಿಯಾದ ಅಮೆಜಾನ್ ಅರಣ್ಯದಲ್ಲಿ ಮೇ 1 ರಂದು ವಿಮಾನವೊಂದು ಪತನಗೊಂಡ ವೇಳೆ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಗುಸ್ತಾವೊ ಪೆಟ್ರೋ ಘೋಷಿಸಿದ್ದಾರೆ.

ಕೊಲಂಬಿಯಾದ ಕಾಡಿನಲ್ಲಿ ವಿಮಾನ ಪತನಗೊಂಡು ಬರೋಬ್ಬರಿ 40 ದಿನಗಳ ಬಳಿಕ 4 ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಮಕ್ಕಳ ಚಿತ್ರಗಳನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್ (13), ಸೊಲೆನಿ ಜಾಕೊಬೊಂಬೈರ್ ಮುಕುಟುಯ್ (9), ಟಿಯೆನ್ ರಾನೋಕ್ ಮುಕುಟುಯ್ (4) ಮತ್ತು ಕ್ರಿಸ್ಟಿನ್ ರಾನೋಕ್ ಮುಕುಟುಯ್ (1) ಇದೀಗ ಪತ್ತೆಯಾಗಿದ್ದು, ಮಕ್ಕಳ ಪೋಷಕರಲ್ಲಿ ಸಂತಸ ಮನೆಮಾಡಿದೆ. ಮೇ 1 ರಂದು, ಸೆಸ್ನಾ 206 ಲಘು ವಿಮಾನವು ಅಮೆಜಾನಾಸ್ ಪ್ರಾಂತ್ಯದ ಅರರಾಕುವಾರಾದಿಂದ
ಗುವಿಯಾರ್‌ನಲ್ಲಿರುವ ಸ್ಯಾನ್ ಜೋಸ್ ಡೆಲ್ ಗುವಿಯಾರೆಗೆ ನಡುವೆ ಹಾರಾಟ ನಡೆಸುತ್ತಿದ್ದಾಗ ಅದು ಕಣ್ಮರೆಯಾಗಿತ್ತು.

ಅಪಘಾತದ ನಂತರ, ಸ್ನಿಫರ್ ಡಾಗ್‌ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆ ವೇಳೆ ವಿಮಾನದ ಅವಶೇಷ ಮತ್ತು ಪೈಲಟ್ ಮತ್ತು ಇಬ್ಬರು ಪುರುಷರ ಮೃತದೇಹ ಪತ್ತೆಯಾಗಿತ್ತು. ಇದೀಗ ಮಕ್ಕಳು ಬದುಕುಳಿದಿರುವುದು ಅಚ್ಚರಿಯೊಂದಿಗೆ ಅಪಘಾತದಲ್ಲಿ ಇನ್ನು ಹಲವರು ಬದುಕುಳಿದಿರಬಹುದು ಎಂಬ ಆಶಾಭಾವ ಮೂಡಿಸಿದೆ.

Sneha Gowda

Recent Posts

ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು

ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ  ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ…

13 mins ago

ನಕಲಿ ಮಸಾಲೆ ಪದಾರ್ಥಗಳನ್ನು ತಯಾರಿಕೆ : ಮೂವರ ಬಂಧನ, 15 ಟನ್‌ ವಶ

ನಕಲಿ ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅವರಿಂದ 15 ಟನ್​ ನಕಲಿ ಮಸಾಲೆ…

16 mins ago

ಮುಂಬೈ ವಿಮಾನ ನಿಲ್ದಾಣದಲ್ಲಿ 12.47 ಕೆ.ಜಿ ಚಿನ್ನ, 10 ಮಂದಿ ಆರೋಪಿಗಳು ವಶಕ್ಕೆ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹8.37 ಕೋಟಿ ಮೌಲ್ಯದ 12.47 ಕೆ.ಜಿ ಚಿನ್ನ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಇಲಾಖೆ ಸಿಬ್ಬಂದಿ…

18 mins ago

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ.…

44 mins ago

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 

44 mins ago

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

1 hour ago