Categories: ವಿದೇಶ

ಬ್ರೂಕ್ಲಿನ್ ಸುರಂಗ ಮಾರ್ಗದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಯ ಬಂಧನ

ಬ್ರೂಕ್ಲಿನ್ ಸುರಂಗ ಮಾರ್ಗದಲ್ಲಿ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ನ್ಯೂಯಾರ್ಕ ಪೋಲೀಸರು ಯಶಸ್ವಿಯಾಗಿದ್ದಾರೆ.

ಏಪ್ರಿಲ್ 12 ಮಂಗಳವಾರದಂದು ಬಂಧಿತ ಆರೋಪಿ ಫ್ರಾಂಕ್ಸ್ ಆರ್. ಜೇಮ್ಸ್ ಬ್ರೂಕ್ಲಿನ್ ಸುರಂಗದಲ್ಲಿ ಪ್ರವೇಶಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿ 10 ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ. ಈ ಘಟನೆ ನಡೆದ 30 ಘಂಟೆಗಳ ಒಳಗೆ ಫೆಡರಲ್ ಭಯೋತ್ಪಾದನಾ ಆರೋಪದ ಅಡಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿ ಜೇಮ್ಸ್ 1997 ರಿಂದ 2007 ರವರೆಗೆ ಹಲವು ಸಣ್ಣಪುಟ್ಟ ಅಪರಾಧಗಳಿಗೆ 12 ಬಾರಿ ಬಂಧಿತನಾಗಿದ್ದು ಜನಾಂಗೀಯತೆ, ಹಿಂಸಾಚಾರ, ಮಾನಸಿಕ ಅಸ್ವಸ್ಥತೆ ಮುಂತಾದ ವಿಚಾರಗಳ ಬಗ್ಗೆ ಹಲವು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದ. ಅಲ್ಲದೇ ಹಲವು ಮತಾಂಧ ಹೇಳಿಕೆಗಳನ್ನು ಹೇಳುವುದಲ್ಲದೇ ಪ್ರಸ್ತುತ ಘಟನೆಗಳ ಬಗ್ಗೆ ತನ್ನ ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದ. ವರ್ಷದ ಹಿಂದೆ ನಗರಕ್ಕೆ ಬಂದು ನೆಲೆಸಿದ್ದ ಜೇಮ್ಸ್ ವೀಡಿಯೋವೊಂದರಲ್ಲಿ ಇಲ್ಲಿನ ಸುರಂಗ ಮಾರ್ಗಗಳಲ್ಲಿ ಸಂಚರಿಸುವ ನಿರಾಶ್ರಿತರ ಬಗ್ಗೆ ಅಸಮಾಧಾನ ಹೊರಹಾಕಿದ್ದ. “ಈ ದೇಶವು ಹಿಂಸಾತ್ಮಕತೆಯಿಂದಲೇ ಉದಯಿಸಿದ್ದು, ಹಿಂಸೆಯ ಮಾರ್ಗದಲ್ಲೇ ಸಾಗುತ್ತಿದ್ದು ಹಿಂಸೆಯಿಂದಲೇ ಕೊನೆಯಾಗುತ್ತದೆ” ಎಂದು ವಿಡಿಯೋವೊಂದರಲ್ಲಿ ಹೇಳುವ ಮೂಲಕ ತನ್ನನ್ನು ತಾನು “ವಿನಾಶದ ಪ್ರವಾದಿ” ಎಂದು ಕರೆದುಕೊಂಡಿದ್ದ.

ಆತನ ಮಾನಸಿಕ ಅಸ್ವಸ್ಥತೆಯ ಕುರಿತಾಗಿ ಆತನ ವೀಡಿಯೋಗಳ ಮೂಲಕವೇ ತಿಳಿದುಬರುತ್ತದೆ ಎಂದು ಕೋರ್ಟಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಈತ ಈಗಾಗಲೇ ಕಳ್ಳತನ, ಲೈಂಗಿಕ ದುರ್ನಡತೆ ಸೇರಿದಂತೆ ಹಲವು ಆರೋಪಗಳ ಮೇಲೆ ಈ ಹಿಂದೆ 12 ಬಾರಿ ಬಂಧಿತನಾಗಿದ್ದ ಆದರೆ ಆಯುಧ ಖರೀದಿಗೆ ನಿರ್ಬಂಧ ಹೇರುವಷ್ಟರಮಟ್ಟಿಗಿನ ಅಪರಾಧ ಮಾಡಿರಲಿಲ್ಲ. ಆತ ದಾಳಿಗೆ ಬಳಸಿದ ಪಿಸ್ತೂಲು ಸಹ ಕಾನೂನುಬದ್ಧವಾಗಿಯೇ ಖರೀದಿಸಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

6 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

6 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

7 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

7 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

7 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

7 hours ago