ಪಂಜಾಬ್ : ಮಗನನ್ನು ಪಡೆಯಲು ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಮಗಳನ್ನು ನಿರ್ದಯವಾಗಿ, ಕರುಣೆ ಎಂಬ ಲವಲೇಶವೂ ಇಲ್ಲದೆ ಗುಂಡಿಕ್ಕಿ ಕೊಂದ ಪೈಶಾಚಿಕ ಕೃತ್ಯ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ತವರೂರು ಮಿಯಾನ್ವಾಲಿಯಲ್ಲೇ ಭಾನುವಾರ ಈ ಘಟನೆ ನಡೆದಿದ್ದು, ಶಹಜೈಬ್ ಖಾನ್ ಎಂಬಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿ ಇಸ್ಮಾಯಿಲ್ ಖಾರಕ್ ಪ್ರಕಾರ, ಶಂಕಿತ ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ ಹಿಂದೆ ಮಶಾಲ್ ಫಾತಿಮಾಳನ್ನು ಮದುವೆಯಾಗಿದ್ದ ಮತ್ತು ಒಂದು ವಾರದ ಹಿಂದೆ ಆತನ ಪತ್ನಿ ಮಗಳಿಗೆ ಜನ್ಮ ನೀಡಿದ್ದಳು. ಅಜ್ಜಿಯರಿಂದ ಜನ್ನತ್ ಎಂದು ಹೆಸರಿಸಲಾದ ಹುಡುಗಿಯ ಜನನದ ಸುದ್ದಿಯನ್ನು ಕೇಳಿದ ಖಾನ್, ತನ್ನ ಹೆಂಡತಿ ಮತ್ತು ಮಗಳನ್ನು ಶಪಿಸಲು ಪ್ರಾರಂಭಿಸಿ ಕೃತ್ಯ ಎಸಗಿದ್ದಾನೆ.
ಹೆಣ್ಣು ಮಗು ಹುಟ್ಟಿದ ಆಕ್ರೋಶದಲ್ಲಿ ಮನೆ ಬಿಟ್ಟು ಹೋಗಿದ್ದ ಶಹಜೈಬ್ ಖಾನ್ ಭಾನುವಾರ ಮನೆಗೆ ಮರಳಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಶಿಶುವನ್ನು ಹತ್ಯೆಗೈದಿದ್ದಾನೆ. ಸದ್ಯ ಶಹಜೈಬ್ ಖಾನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.
ಬಸ್ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇಯಲ್ಲಿ…
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್ಸಿಎಲ್ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…
ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ…
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…
ದೊಡ್ಮನೆ ಕುಡಿ ಯುವರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…