News Karnataka Kannada
Monday, April 29 2024
ವಿದೇಶ

ಉತ್ತರ ಕೊರಿಯಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

Untitled 1
Photo Credit :

 ಉತ್ತರ ಕೊರಿಯಾ:   ಇದೇ ಮೊದಲ ಬಾರಿಗೆ ಕೋವಿಡ್-19 ಪ್ರಕರಣ ಪತ್ತೆಯಾಗಿದೆ. ಸೋಂಕು ಹರಡುವುದನ್ನು ಹತ್ತಿಕ್ಕಲು ದೇಶದಲ್ಲಿ ‘ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಲಾಗಿದೆ. ಅಲ್ಲದೆ, ಕೊರೊನಾ ವೈರಸ್‌ ಅನ್ನು ನಿರ್ಮೂಲನೆ ಮಾಡಲು ಕಿಮ್ ಜೊಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಬಡ, ಪರಮಾಣು ಸಶಸ್ತ್ರ ರಾಷ್ಟ್ರದಲ್ಲಿ ಈ ವರೆಗೆ ಒಂದೇ ಒಂದು ಕೋವಿಡ್‌ ಪ್ರಕರಣಗಳೂ ವರದಿಯಾಗಿರಲಿಲ್ಲ. ದೇಶಕ್ಕೆ ಕೋವಿಡ್‌ ಸಾಂಕ್ರಾಮಿಕ ಪ್ರವೇಶಿಸಿಲ್ಲ ಎಂದು ಆ ದೇಶ ಈ ವರೆಗೆ ಪ್ರತಿಪಾದಿಸಿತ್ತು. 2019 ರಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದಲೂ ಸರ್ಕಾರವು ದೇಶದ ಎಲ್ಲ ಗಡಿಗಳಲ್ಲಿ ಕಠಿಣ ದಿಗ್ಬಂಧನ ಜಾರಿಗೆ ತಂದಿತ್ತು.

ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬರಿಂದ ಪಡೆದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ವ್ಯಕ್ತಿಗೆ ಓಮೈಕ್ರಾನ್‌ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಕೊರಿಯದ ಸರ್ಕಾರಿ ಸುದ್ದಿ ಸಂಸ್ಥೆ ‘ಕೆಸಿಎನ್‌ಎ’ ವರದಿ ಮಾಡಿದೆ.

ದೇಶದ ನಾಯಕ ಕಿಮ್ ಜೊಂಗ್ ಉನ್ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು ಸೋಂಕಿನ ಕುರಿತು ಚರ್ಚಿಸಲು ಪಾಲಿಟ್‌ಬ್ಯೂರೋದ ತುರ್ತು ಸಭೆ ನಡೆಸಿದರು. ವೈರಸ್‌ ನಿಯಂತ್ರಣಕ್ಕಾಗಿ ಗರಿಷ್ಠ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಕಿಮ್‌ ಘೋಷಿಸಿದರು.

‘ಕಡಿಮೆ ಅವಧಿಯಲ್ಲಿ ವೈರಸ್‌ ಅನ್ನು ತೊಡೆದುಹಾಕುವುದು ಎಲ್ಲರ ಗುರಿಯಾಗಬೇಕು’ ಎಂದು ಕಿಮ್ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ಬಿಗಿಯಾದ ಗಡಿ ನಿಯಂತ್ರಣಗಳು ಮತ್ತು ಲಾಕ್‌ಡೌನ್ ಕ್ರಮಗಳನ್ನು ಜಾರಿಗೊಳಿಸಲು ಸೂಚನೆ ನೀಡಿದರು’ ಎಂದು ವರದಿಯಾಗಿದೆ.

ಎಲ್ಲಾ ವ್ಯಾಪಾರ ಮತ್ತು ಉತ್ಪಾದನಾ ಚಟುವಟಿಕೆಗಳು ನಡೆಯುತ್ತವಾದರೂ, ಪ್ರತಿ ಕೆಲಸದ ಘಟಕಗಳನ್ನು ಪ್ರತ್ಯೇಕಿಸಲು ತೀರ್ಮಾನಿಸಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.

ಲಸಿಕೆ ಪೂರೈಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಮತ್ತು ರಷ್ಯಾದಿಂದ ಪ್ರಸ್ತಾವಗಳು ಬಂದಿದ್ದವಾದರೂ, ಉತ್ತರ ಕೊರಿಯಾ ಅದನ್ನೆಲ್ಲ ನಿರಾಕರಿಸಿತ್ತು. ಹೀಗಾಗಿ ಅಲ್ಲಿನ 2.50 ಕೋಟಿ ಜನರಲ್ಲಿ ಯಾರೊಬ್ಬರೂ ಕೋವಿಡ್‌ ಲಸಿಕೆ ಪಡೆದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು