News Karnataka Kannada
Monday, April 29 2024
ವಿದೇಶ

50 ಭಾರತೀಯರು ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ:ವಿದೇಶಾಂಗ ಸಚಿವಾಲಯ

Flightt
Photo Credit :

ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಇನ್ನೂ ಮುಂದುವರೆದಿದೆ. ಮೂರು ದಿನಗಳ ಹಿಂದೆ ಸಿಕ್ಕಿರುವ ಮಾಹಿತಿ ಅನ್ವಯ ಉಕ್ರೇನ್‌ನಲ್ಲಿ 50 ಭಾರತೀಯರು ಸಿಲುಕಿದ್ದಾರೆ,ಇವರಲ್ಲಿ 15 ರಿಂದ 20 ಜನರು ದೇಶಕ್ಕೆ ವಾಪಸ್ ಆಗಲು ಬಯಸಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಮಾತನಾಡಿದ್ದು, “ಯುದ್ಧ ಮುಂದುವರೆಯುತ್ತಲೇ ಇದೆ.ಆದರೆ ಅಲ್ಲಿಂದ ಮರಳುವವರನ್ನು ನಾವು ವಾಪಸ್ ಕರೆತರುತ್ತೇವೆ. ಅದಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ” ಎಂದರು.

“15 ರಿಂದ 20 ಭಾರತೀಯರು ವಾಪಸ್ ಬರಲು ಬಯಸಿದ್ದಾರೆ. ಯುದ್ಧ ನಡೆಯುತ್ತಿದ್ದರೂ ನಾವು ಅವರು ವಾಪಸ್ ಆಗಲು ಬೇಕಾದ ಸಹಕಾರವನ್ನು ನೀಡುತ್ತೇವೆ. ವಾಪಸ್ ಬರಲು ಬಯಸಿರುವ ಎಲ್ಲಾ ಭಾರತೀಯರನ್ನು ನಾವು ಸಂಪರ್ಕಿಸಿದ್ದೇವೆ” ಎಂದು ಅರಿಂದಮ್ ಬಗ್ಚಿ ಹೇಳಿದರು.

ಉಳಿದವರು ಈಗಲೇ ಮರಳುವುದಿಲ್ಲ. ವಾಪಸ್ ಬರಲು ಬಯಸಿದವರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು