ಸಿಂಗಾಪುರ: ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಮಂಗಳವಾರ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ (ಸಿಂಗಾಪೂರಿಯನ್) ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1 ಮಿಲಿಯನ್ ಮೌಲ್ಯದ ಚಿನ್ನಾಭರಣಗಳನ್ನು ಪದೇ ಪದೇ ಗಿರವಿ ಇಟ್ಟು ಹಣ ಪಡೆದ ಆರೋಪ ಈತನ ಮೇಲಿದೆ.
ಸೌತ್ ಬ್ರಿಡ್ಜ್ ರೋಡ್ನಲ್ಲಿರುವ ಶ್ರೀ ಮಾರಿಯಮ್ಮನ್ ದೇವಸ್ಥಾನದ ಅರ್ಚಕ ಕಂದಸಾಮಿ ಸೇನಾಪತಿ ಅವರು ಆಭರಣಗಳನ್ನು ಗಿರವಿ ಇಡುವ ಮೂಲಕ $2.3 ಮಿಲಿಯನ್ (ಸಿಂಗಪೋರಿಯನ್) ಗಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
ಕಂದಸಾಮಿ ಅವರು ಡಿಸೆಂಬರ್ 2013 ರಲ್ಲಿ ಹಿಂದೂ ದತ್ತಿ ಮಂಡಳಿ ನಲ್ಲಿ ಉದ್ಯೋಗಿಯಾಗಿದ್ದು, ಜುಲೈ 2018 ರಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬಡ್ತಿ ಪಡೆದರು ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನಿಸ್ ಸೀ ನ್ಯಾಯಾಲಯಕ್ಕೆ ತಿಳಿಸಿದ್ದರು.
2014 ರಲ್ಲಿ, ದೇವಾಲಯದ ಪವಿತ್ರ ಗರ್ಭಗುಡಿಯ ಕೀಗಳು ಮತ್ತು ನಂಬರ್ ಕೋಡ್ ಅನ್ನು ಅವರಿಗೆ ವಹಿಸಲಾಯಿತು. ದೇವಳದಲ್ಲಿ ಸುಮಾರು $1.1 ಮಿಲಿಯನ್ (ಸಿಂಗಪೋರಿಯನ್) ಮೌಲ್ಯದ ಸುಮಾರು 255 ಚಿನ್ನಾಭರಣಗಳಿವೆ.
ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.
ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…
ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.
ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್ ಅನುಮತಿ ಮೇರೆಗೆ ಮಂಗಳವಾರ…