ವೈರಲ್: ಇತ್ತೀಚೆಗೆ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ತನ್ನ ತಾಯಿ ಕ್ಯಾನ್ಸರ್ನಿಂದ ಸಾಯುವ ಮೊದಲು ಬರೆದಿದ್ದ ಹೃದಯಸ್ಪರ್ಶಿ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ತಾಯಿಯು ಮಗನಿಗೆ ಚಿಕಿತ್ಸೆ ಸಮಯದಲ್ಲಿ ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾಳೆ.
ಮ್ಯಾಟ್ ಗಾಲ್ಡ್ ಎಂಬ ವ್ಯಕ್ತಿ ತಾಯಿಯು ಕಡೆಯದಾಗಿ ತನಗಾಗಿ ಬಿಟ್ಟು ಹೋದ ಪತ್ರವನ್ನು ಹಂಚಿಕೊಂಡಿದ್ದು, ‘ಅಮ್ಮ ಕ್ಯಾನ್ಸರ್ನಿಂದ ನಿಧನರಾದ ನಂತರ ನಾನು ಕಂಡುಕೊಂಡ ಒಂದು ಪತ್ರ ‘ ಎಂದು ಶೀರ್ಷಿಕೆ ಬರೆದಿದ್ದಾರೆ.
ಜೊತೆಗೆ, ನಾನು ಆಕೆಯನ್ನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇನೆ. ಆಕೆಯ ಈ ಪತ್ರ ನನ್ನನ್ನು ಅಳುವಂತೆ ಮಾಡುತ್ತದೆ. ಆದರೆ ನನ್ನ ಮುಖದ ಮೇಲೆ ನಗುವಿನೊಂದಿಗೆ ನಾನು ಅಳುತ್ತೇನೆ. ಈಗ ಸಮಯವು ಕಷ್ಟಕರವಾಗಿದೆ. ಏಕೆಂದರೆ ನನ್ನ ತಂದೆ ಕೂಡಾ ಈಗ ಕ್ಯಾನ್ಸರ್ನಿಂದಾಗಿ ಐಸಿಯುನಲ್ಲಿದ್ದಾರೆ. ನೀವು ಯಾರನ್ನಾದರೂ ಎಷ್ಟು ಪ್ರೀತಿಸುತ್ತೀರಿ ಮತ್ತು ಅವರು ನಿಮಗೆ ಎಷ್ಟು ಅರ್ಥವಾಗಿದ್ದಾರೆ ಎಂಬುದನ್ನು ನೀವು ಇಷ್ಟಪಡುವವರಿಗೆ ಹೇಳಲು ಮರೆಯದಿರಿ.’ ಎಂದು ಮ್ಯಾಟ್ ಬರೆದಿದ್ದಾರೆ.
ತಾಯಿಯು ತಮ್ಮ ಪತ್ರದಲ್ಲಿ,’ನೀನು ಒಂದು ದಿನ ಇದನ್ನು ಕಂಡುಕೊಳ್ಳುವ ಭರವಸೆಯಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಬರೆದಿದ್ದಾರೆ.
ಮುಂದುವರಿದು ‘ನನಗೆ ಅಗತ್ಯವಿರುವಾಗ ನೀನು ಯಾವಾಗಲೂ ನನ್ನೊಂದಿಗೆ ಇರುತ್ತಿದ್ದಿ. ನಿನಗೆ ಯಾವುದೇ ಆದಾಯವಿರುವುದಿಲ್ಲ ಎಂದು ತಿಳಿದೂ ನನ್ನನ್ನು ಚಿಕಿತ್ಸೆ ಸಮಯದಲ್ಲಿ ನೋಡಿಕೊಳ್ಳಲು ನೀನು ನಿನ್ನ ಕೆಲಸವನ್ನು ತೊರೆದಿದ್ದೀ. ಎಂತಹ ಅದ್ಭುತವಾದ ಕೆಲಸ ನಿನ್ನದು. ಅದಕ್ಕೆ ಧನ್ಯವಾದಗಳು,’ಎಂದು ತಾಯಿ ಪತ್ರದಲ್ಲಿ ಬರೆದಿದ್ದಾರೆ.
‘ನಾನು ಯಾವಾಗಲೂ ನಿನ್ನನ್ನು ಗಮನಿಸುತ್ತಿರುತ್ತೇನೆ. ನಾನು ಸಾಯುವ ಭಯಕ್ಕಿಂತ ಹೆಚ್ಚಾಗಿ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ನಾನು ಯಾವಾಗಲೂ ಹೆದರುತ್ತಿದ್ದೆ. ನೀನು ಎಂದೆಂದಿಗೂ ಅತ್ಯುತ್ತಮ ಮಗ’ ಎಂದು ಆಕೆ ಮಗನಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಅವರು ತಮ್ಮ ಪತ್ರದಲ್ಲಿ ಅವರ ವಿಶೇಷ ಬಂಧದ ಬಗ್ಗೆ ಮಾತನಾಡುತ್ತಾ, ಮಗನೊಂದಿಗೆ ಕಳೆದ ಸಮಯ ಅವರ ಜೀವನದ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ ಎಂದು ವಿವರಿಸಿದ್ದಾರೆ.
ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…
ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…
ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…
ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…
ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ…