ಕಾನ್ಪುರ, ಮೇ.16: ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ದಂಪತಿ ಸಾವನ್ನಪ್ಪಿರುವ ಘಟನೆ ಕಾನ್ಪುರದ ಬಿಲ್ಹೌರ್ನಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಧೌರ್ಸಲಾರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆಯನ್ನು ನಿರ್ಮಲಾ (48) ಎಂದು ಗುರುತಿಸಲಾಗಿದ್ದು, ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿದ್ದಾರೆ. ಹತ್ತಿರದಲ್ಲಿ ನಿಂತಿದ್ದ ಪತಿ ತನ್ನ ಹೆಂಡತಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಆಕೆ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ವೇಳೆ ಸಂತೋಷ್ ಗುಪ್ತಾ (50) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂತೋಷ್ ಗುಪ್ತಾ ಕುಟುಂಬ ಹಿಟ್ಕರಿ ನಗರದಲ್ಲಿ ವಾಸಿಸುತ್ತಿತ್ತು. ಅವರ ತಂದೆ ಜನರಲ್ ಸ್ಟೋರ್ ಹೊಂದಿದ್ದರು.