ಕಂಗನಾ ಮಾತ್ರ ದೇಶದ ಮಗಳೇ, ನಾನಲ್ಲವೇ : ಆಕ್ರೋಶ ಹೊರ ಹಾಕಿದ ಗಾಯಕಿ

ಉತ್ತರ ಪ್ರದೇಶ:  ಲೋಕಸಭಾ ಚುನಾವಣ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹೊರಹಾಕಿದ್ದ ಸುಪ್ರಿಯಾ ಶ್ರೀನೆಟ್ ಪ್ರಕರಣದ ರಾಜಕೀಯ ಕ್ಷೇತ್ರದಲ್ಲಿ ಭಾರೀ ಚರ್ಚೆಯಾಗಿತ್ತು ಮತ್ತು ಅದನ್ನು ತಾನು ಮಾಡಿಲ್ಲವೆಂದು ಸುಪ್ರಿಯಾ ಸ್ಪಷ್ಟನೆ ನೀಡಿದ್ದರು ಇದರ ಕಾವು ಹಾರುವ ಬೆನ್ನಲ್ಲೆ ಉತ್ತರ ಪ್ರದೇಶದ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್, ತನಗೆ ಅವಮಾನ ಮಾಡುವವರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ತೀರಿ ಎಂದು ಟ್ವೀಟ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ನೇಹಾ ಸಿಂಗ್ ರಾಥೋಡ್ ಟ್ವೀಟ್ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಇನ್ನು ನೇಹಾ ಟ್ವೀಟ್‌ನಲ್ಲಿ ಸ್ಮೃತಿಇರಾನಿ, ನರೇಂದ್ರಮೋದಿ, ಜೆ ಪಿ ನಡ್ಡಾ, ಹಾಗೂ ಅಮಿತ್‌ಶಾ ಅವರನ್ನು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.

 

ಕಂಗನಾ ರಣಾವತ್ ಮಾತ್ರ ಈ ದೇಶದ ಮಗಳೇ..?
ಬಿಜೆಪಿ ಮಾಧ್ಯಮಗಳಿಗೆ ಅವಳ ನೋವು ಮಾತ್ರ ಕಾಣುತ್ತಿದೆಯೇ?
ಇಂದು ಬೆಳಗ್ಗೆಯಿಂದ ನೀಲಿಚಿತ್ರ ತಾರೆ ಮಿಯಾ ಖಲಿಫ್ ಜೊತೆ ನನ್ನ ಫೋಟೋ ಕೊಲಾಜ್ ಮಾಡಿ ಟ್ವಿಟರ್​ನಲ್ಲಿ ಟ್ರೆಂಡ್ ಮಾಡ್ತಿದ್ದಾರೆ. ಬುದ್ಧಿ ಇರೋರು ಯಾರೂ ನೋಡ್ತಿಲ್ಲವೇ?
ಮೋದಿಜೀ ಅವರ ಕುಟುಂಬದಿಂದ ಪಾರಾಗಲು ನಾನು ಒಬ್ಬಂಟಿಯಾಗಿ ಹೋರಾಡಬೇಕೇ..?
ಬಿಜೆಪಿ ಮಹಿಳಾ ಅಭ್ಯರ್ಥಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲಾ ರೀತಿಯ ಹೋರಾಟ ನಡೆಸುತ್ತದೆಯೇ?
ರಾಷ್ಟ್ರೀಯ ಮಹಿಳಾ ಆಯೋಗ ನನ್ನ ನೋವನ್ನು ಯಾವಾಗ ಆಲಿಸುತ್ತದೆ?
ನನಗೆ ಆಗಿದ ಅವಮಾನ ದೇಶದ ಮಗಳಿಗೆ ಆಗಿರುವ ಅವಮಾನ ಅಲ್ಲವೇ?
ನನಗೆ ಆಗಿರುವ ಅವಮಾನದ ಬಗ್ಗೆ ಮಹಿಳಾ ಆಯೋಗಕ್ಕೆ ಗೊತ್ತಿದೆಯಾ?
ನನ್ನ ಹೆಸರಲ್ಲಿ ಅವಹೇಳನಾಕಾರಿ ಟ್ವೀಟ್​ಗಳನ್ನು ಮಾಡುವ ಮೂಲಕ ಅವಮಾನ ಮಾಡ್ತಿದ್ದಾರೆ, ಅವರಿಗೆ ಯಾವಾಗ ಶಿಕ್ಷೆ ಕೊಡ್ತೀರಿ?
ನನ್ನ ಗೌರವಕ್ಕಾಗಿ ನಾನು ಮಾತ್ರ ಹೋರಾಡಬೇಕೇ..?
ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಕ್ಕೆ ಎಷ್ಟೊಂದು ಶಿಕ್ಷೆ ವಿಧಿಸಲಾಗುತ್ತದೆ? ನನ್ನ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬೇಕು ಎಂದು ಸರ್ಕಾರಕ್ಕೆ ಜನಪದ ಗಾಯಕಿ ನೇಹಾಸಿಂಗ್‌ ಕೇಳಿಕೊಂಡಿದ್ದಾರೆ.

 

Nisarga K

Recent Posts

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

3 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

18 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

2 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

2 hours ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

3 hours ago