ಅಯೋಧ್ಯೆ: ಅಯೋಧ್ಯೆಯಲ್ಲಿ ಪುನರ್ನಿರ್ಮಾಣವಾದ ಮಂದಿರದಲ್ಲಿ ಮೊದಲ ರಾಮನವಮಿ ಆಚರಣೆಯಾಗಲಿದ್ದು, ಆ ದಿನ ರಾಮಲಲ್ಲಾನ ವಿಗ್ರಹಕ್ಕೆ ಸೂರ್ಯತಿಲಕವಿಡಲು ಸಕಲ ತಯಾರಿಗಳು ನಡೆದಿವೆ.
ರಾಮನವಮಿಯಂದು ಸೂರ್ಯನ ಕಿರಣವು ನೇರವಾಗಿ ರಾಮನ ಹಣೆಗೆ ಬಿದ್ದು ತಿಲಕದಂತೆ ಕಂಗೊಳಿಸಲು ತಯಾರಿ ಮಾಡಲಾಗುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಗರ್ಭಗುಡಿಯ ವಿನ್ಯಾಸ ಮಾಡಲಾಗಿದೆ.
ದೇವಾಲಯದ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿರದೆ, ಶಿಖರದ ಕಾಮಗಾರಿ ಇನ್ನೂ ಬಾಕಿ ಇದೆ. ಹೀಗಿರುವಾಗ ಸೂರ್ಯತಿಲಕವನ್ನು ನೋಡಲು ಭಕ್ತರು ಇನ್ನೂ ಕೆಲ ವರ್ಷಗಳ ಕಾಲ ಕಾಯಬೇಕಾಗಿ ಬರುವ ಕಾರಣ ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೂರ್ಕಿಯ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.
ರಾಮನವಮಿಯಂದು ಲಲ್ಲಾನ ದರ್ಶನ ಪಡೆಯಲು ಬರುವ ಭಕ್ತರಿಗೆ ೨೦ ಗಂಟೆಗಳ ಕಾಲ ಅವಕಾಶ ನೀಡಲಾಗುತ್ತದೆ.