News Karnataka Kannada
Monday, April 29 2024
ಉತ್ತರ ಪ್ರದೇಶ

ಅಯೋಧ್ಯೆಯಲ್ಲಿ ಸೌರ ಶಕ್ತಿ ಚಾಲಿತ ದೋಣಿ ಪ್ರವಾಸೋದ್ಯಮ

Solar powered boat tourism in Ayodhya
Photo Credit : News Kannada

ಲಕ್ನೋ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಲ ಸಾರಿಗೆ ಉತ್ತೇಜನಕ್ಕೆ ಮುಂದಾಗಿದೆ. ರಾಜ್ಯದಲ್ಲಿ ನದಿ, ಸರೋವರ ಸೌರಶಕ್ತಿ ಚಾಲಿತ ದೋಣಿ ನಿಯೋಜನೆಗೆ ಮುಂದಾಗಿದೆ.

ದೋಣಿಗಳನ್ನು ನಿರ್ವಹಿಸಲು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಉತ್ತರ ಪ್ರದೇಶ ಸರ್ಕಾರ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (UPNEDA) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಎ.ಕೆ.ಶರ್ಮಾ ಮಾತನಾಡಿ, “ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ವಿದ್ಯುತ್ ಮೂಲಗಳ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ” ಎಂದು ತಿಳಿಸಿದ್ದಾರೆ.

ಯುಪಿ ಸರ್ಕಾರವು ಅಯೋಧ್ಯೆ ಮತ್ತು ವಾರಣಾಸಿಯನ್ನು ಸೌರ ನಗರಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಇದು ಪ್ರವಾಸಿಗರಿಗೆ ಮಾಲಿನ್ಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸೌರ ದೋಣಿಗಳು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ಆಶಿಸಲಾಗಿದೆ. ಈ ಕ್ರಮವು ಮೀನುಗಾರ ಸಮುದಾಯವು ತಮ್ಮ ದೋಣಿಗಳನ್ನು ಸೌರಶಕ್ತಿ ಚಾಲಿತಗೊಳಿಸಲು ಉತ್ತೇಜನ ನೀಡಲಿದೆ ಎನ್ನಲಾಗಿದೆ.

ಪೈಲಟ್ ಯೋಜನೆಯಾಗಿ ಮೂರು ಸೌರಶಕ್ತಿ ಚಾಲಿತ ದೋಣಿಗಳನ್ನು ನಿರ್ವಹಿಸಲಾಗುವುದು. ವಾರಣಾಸಿಯಲ್ಲಿ ಒಂದು ಮತ್ತು ಅಯೋಧ್ಯೆಯಲ್ಲಿ ಎರಡು ಸೋಲಾರ್ ದೋಣಿಗಳನ್ನು ಹಾಕಲಾಗುವುದು. ಒಂದು ಬೋಟ್‌ಗೆ 1.05 ಕೋಟಿ ರೂ. ವೆಚ್ಚವಾಗಲಿದ್ದು, ಇಂತಹ 17 ಬೋಟ್‌ಗಳನ್ನು ಪರಿಚಯಿಸಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು