News Karnataka Kannada
Monday, April 29 2024
ಉತ್ತರ ಪ್ರದೇಶ

ದೇಶದ ಜನತೆ ಮುಂದೆ 9 ಬೇಡಿಕೆ ಇರಿಸಿದ ಪ್ರಧಾನಿ ಮೋದಿ

New Project 2023 12 19t161613.021
Photo Credit : News Kannada

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಕಳೆದೆರಡು ದಿನಗಳಿಂದ ತಾವು ಸ್ಪರ್ಧೆ ಮಾಡಿದ ವಾರಣಸಿ ಕ್ಷೇತ್ರದಲ್ಲಿದ್ದಾರೆ. ಈ ವೇಳೆ ಅವರು ಅಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಧ್ಯಾನಕೇಂದ್ರಕ್ಕೆ ಸ್ವರವೇದ ಮಹಾಮಂದಿರ ಎಂದು ನಾಮಕರಣ ಮಾಡಲಾಗಿದ್ದು, ಇದು 3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಏಕಕಾಲಕ್ಕೆ 20 ಸಾವಿರ ಮಂದಿ ಧ್ಯಾನ ಮಾಡುವಷ್ಟು ವಿಶಾಲವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಜನತೆ ಮುಂದೆ 9 ಬೇಡಿಕೆ ಇರಿಸಿದ್ದಾರೆ.

ನೀರು ಉಳಿಸಿ, ಹಳ್ಳಿಯಲ್ಲಿ ಡಿಜಿಟಲ್‌ ವಹಿವಾಟು ಬಗ್ಗೆ ತಿಳಿಸಿ, ನಿಮ್ಮ ಊರನ್ನು ನಂ. 1 ಸ್ವಚ್ಛ ಊರು ಮಾಡಿ, ಸ್ಥಳೀಯ ಉತ್ಪನ್ನ ಉತ್ತೇಜಿಸಿ, ದೇಶದೊಳಗೆ ಪ್ರವಾಸ ಮಾಡಿ ದೇಶದಲ್ಲೇ ಮದುವೆ ಆಗಿ, ರೈತರಿಗೆ ನೈಸರ್ಗಿಕ ಕೃಷಿ ಬಗ್ಗೆ ತಿಳಿಸಿ, ಊಟದಲ್ಲಿ ಸಿರಿಧಾನ್ಯ ಬಳಸಿ, ಯೋಗ, ಜಿಮ್ ಮಾಡಿ, ಕನಿಷ್ಠ 1 ಬಡ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸ್ವಾತಂತ್ರ್ಯಾ ನಂತರ ನಮ್ಮ ಸಂಸ್ಕೃತಿಯ ಚಿಹ್ನೆಗಳನ್ನು ಮರುಸೃಷ್ಟಿ ಮಾಡುವ ಕಾರ್ಯ ನಡೆಯುತ್ತಿದೆ. ಸೋಮನಾಥ ದೇವಾಲಯ ಮರು ನಿರ್ಮಾಣ ಮಾಡುವಾಗ ಉಂಟಾದ ಅಡೆತಡೆಗಳಂತೆ ವಾರಾಣಸಿಯಲ್ಲೂ ಗತವೈಭವ ನಿರ್ಮಾಣ ಮಾಡುವಲ್ಲಿ ಹಲವು ತೊಡರುಗಳು ಎದುರಾದವು. ಆದಾಗ್ಯೂ ಸರ್ಕಾರ, ಸಾಧು-ಸಂತರು ಮತ್ತು ಸಮಾಜದ ಒಗ್ಗಟ್ಟಿನ ಬಲದಿಂದ ಕಾಶಿಯಲ್ಲಿ ಗತವೈಭವ ಮರುಕಳಿಸುವ ಕಾಲ ಸನ್ನಿಹಿತವಾಗಿದೆ’ ಎಂದು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು