News Karnataka Kannada
Wednesday, May 01 2024
ಉತ್ತರ ಪ್ರದೇಶ

ಭಕ್ತರೊಂದಿಗೆ ಪ್ರವಾಸಿಗರನ್ನೂ ಸೆಳೆಯಲಿರುವ ಅಯೋಧ್ಯೆ; ದೇಶದ ಮೊದಲ ಸಸ್ಯಹಾರಿ ೭ಸ್ಟಾರ್ ಹೋಟೆಲ್

ಅಯೋಧ್ಯೆಯಲ್ಲಿ ದೇಶದ ಮೊದಲ ೭ ಸ್ಟಾರ್ ಹೋಟೆಲ್ ತೆರೆಯಲಿದ್ದು, ಇದು ಶುದ್ಧ ಸಸ್ಯಾಹಾರಿಯಾಗಿರಲಿದೆ.
Photo Credit : News Kannada

ಅಯೋಧ್ಯೆ: ಅಯೋಧ್ಯೆಯಲ್ಲಿ ದೇಶದ ಮೊದಲ ೭ ಸ್ಟಾರ್ ಹೋಟೆಲ್ ತೆರೆಯಲಿದ್ದು, ಇದು ಶುದ್ಧ ಸಸ್ಯಾಹಾರಿಯಾಗಿರಲಿದೆ.

ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಪಂಚತಾರಾ ಹೋಟೆಲ್ ಸ್ಥಾಪಿಸಲಿದ್ದು, ರಾಮಮಂದಿರದ ಉದ್ಘಾಟನೆಯ ದಿನವೇ ಇಲ್ಲಿ ವಸತಿ ಯೋಜನೆಗೆ ಚಾಲನೆ ನೀಡಲಾಗುವುದು.

ರಾಮ ಮಂದಿರ ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಜೊತೆಗೆ ತನ್ನ ಸುತ್ತಮುತ್ತ ಆರ್ಥಿಕ ಚಟುವಟಿಗೆಕಗಳು ಚುರುಕುಗೊಳ್ಳುವಂತೆ ಮಾಡಿದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯುವ ಸೂಚನೆ ಸ್ಪಷ್ಟವಾಗಿ ಸಿಗುತ್ತಿದ್ದಂತೆ ನಗರದಲ್ಲಿ ಅಭಿವೃದ್ಧಿ ಕೆಲಸಗಳು ವೇಗಪಡೆದಿದ್ದು, ಹೋಟೆಲ್‌ ಹಾಗು ವಸತಿ ಗೃಹಗಳು ಜನರ ಬೇಡಿಕೆ ಪೂರೈಸಲು ಸಜ್ಜಾಗುತ್ತಿವೆ.

ಸರಯೂ ನದಿಯ ದಡದಲ್ಲಿ ಹಲವಾರು ಪಂಚತಾರಾ ಹೋಟೆಲ್ ಗಳು ತೆರೆಯಲಿದ್ದು, ಸುಮಾರು ೧೧೦ ಸಣ್ಣ ಹಾಗು ದೊಡ್ಡ ಉದ್ಯಮಿಗಳು ಅಯೋಧ್ಯೆಯಲ್ಲಿ ಭೂಮಿ ಖರೀದಿಸಲು ಮುಂದಾಗಿದ್ದಾರೆ. ಅಮಿತಾಬ್ ಬಚ್ಚನ್ ದೇವಸ್ತಾನದಿಂದ ೧೫ ನಿಮಿಷಗಳ ದೂರದಲ್ಲಿರುವ ʼದಿ ಸರಯುʼ ಎಕ್ಸ್‌ಕ್ಲೇವ್ ನಲ್ಲಿ ಜಾಗ ಖರೀದಿಸಿದ್ದಾರೆ.

ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಲಾದ ರೈಲು ನಿಲ್ದಾಣ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಶುಕ್ರವಾರದಿಂದ ಹೆಲಿಕಾಷ್ಟರ್ ಸೇವೆ ಪ್ರಾರಂಭವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು