ಉತ್ತರ ಪ್ರದೇಶ : ಉತ್ತರ ಪ್ರದೇಶದ ಖುಷಿನಗರದಲ್ಲಿ ಅಕ್ಟೋಬರ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ. ಈ ನಿಲ್ದಾಣಕ್ಕೆ ಅಧಿಕೃತವಾಗಿ ಬಂದಿಳಿಯುವ ಮೊದಲ ವಿಮಾನದಲ್ಲಿ ಶ್ರೀಲಂಕಾ ಅಧ್ಯಕ್ಷರು 125 ಮಂದಿಯ ನಿಯೋಗದೊಂದಿಗೆ ಬರಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಖುಷಿನಗರ ಹಲವು ಬೌದ್ಧ ಯಾತ್ರಾಸ್ಥಳಗಳಿಗಾಗಿ ಹೆಸರುವಾಸಿ. ಭಗವಾನ್ ಬುದ್ಧ ನಿರ್ವಾಣವನ್ನು ಹೊಂದಿದ ಸ್ಥಳವಿದು. ಬುದ್ಧ ನಿರ್ವಾಮ ಹೊಂದಿದ ಜಾಗದಲ್ಲಿ ಮಹಾನಿರ್ವಾಣ ಸ್ತೂಪವನ್ನು ನಿರ್ಮಿಸಲಾಗಿದೆ. ಅನೇಕ ಬೌದ್ಧ ಪ್ರಾರ್ಥನಾ ಸ್ಥಳಗಳೂ ಇಲ್ಲಿವೆ. ಬೌದ್ಧಮತ ಪರಿಪಾಲಕರಾದ ಸಿಂಹಳೀಯರಿಗೆ ಇವೆಲ್ಲ ಮಹತ್ವದ ಜಾಗಗಳೇ ಆಗಿವೆ. ಅದೇ ದಿನ ವೈದ್ಯಕೀಯ ಕಾಲೇಜಿಗೆ ಸಹ ಖುಷಿನಗರದಲ್ಲಿ ಅಡಿಗಲ್ಲು ಹಾಕಲಿದ್ದಾರೆ ಪ್ರಧಾನಿ ಮೋದಿ.