ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ‘ರಾಮ ನವಮಿ’ ಮತ್ತು ‘ಮಹಾ ನವಮಿ’ ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ವ್ಯಂಗ್ಯವಾಡಿದೆ.
ವಿಶ್ವದಾದ್ಯಂತ ಹಿಂದೂಗಳು ಮಹಾ ನವಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಶುಭ ಹಾರೈಸಿದ ಅಖಿಲೇಶ್, ತಮ್ಮ ಸಂದೇಶದಲ್ಲಿ ಮಹಾ ನಮವಿ ಬದಲು ರಾಮ ನವಮಿ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಬಳಿಕ ಇದನ್ನು ಅಳಿಸಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ‘ನವ ಹಿಂದೂ’ ಆಗಿರುವ ಅಖಿಲೇಶ್ಗೆ ರಾಮ ನವಮಿ ಮತ್ತು ಮಹಾ ನವಮಿ ನಡುವಣ ವ್ಯತ್ಯಾಸ ತಿಳಿದಿಲ್ಲ ಎಂದು ಟೀಕಿಸಿದೆ