News Karnataka Kannada
Thursday, May 02 2024
ತೆಲಂಗಾಣ

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ: ಮೂವರ ಬಂಧನ

ಇದು ಸೂರ್ಯನಿಗೆ ಟಾರ್ಚ್ ಹಾಕಲು ಹೋದವರ ಕಥೆ. ಚುನಾವಣಾ ವಾಹನ ತಪಾಸಣೆ ಮಾಡುವ ಅಧಿಕಾರಿಗಳ ವಾಹನ ತಡೆದು ತಾವು ಪೊಲೀಸ್ ಅಧಿಕಾರಿಗಳು ವಾಹನ ತಪಾಸಣೆಗೆ ಬಂದಿದ್ದಾಗಿ ಹೇಳಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಗಳ ಪೈಕಿ ಒಬ್ಬ ಸಿಕ್ಕಿಬಿದ್ದಿದ್ದರೆ, ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.
Photo Credit : News Kannada

ಹೈದರಾಬಾದ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಚೌಟುಪ್ಪಲ್ ಪೊಲೀಸರೊಂದಿಗೆ ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ ಭೇದಿಸಿದೆ.

ಈ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿದ್ದು, ಅವರಿಂದ 64 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಫಯಾಸ್ (29) ಅನಂತ ಮೋಹನ್ (25) ಸೈಯದ್ (39) ಬಂಧಿತ ಆರೋಪಿಗಳು. ಯೋಜನೆ ರೂಪಿಸಿ, ಡ್ರಗ್ಸ್ ಇರುವ ಕಾರನ್ನು ಸೈಯದ್ ಚಾಲನೆ ಮಾಡಲು ಮತ್ತು ಫಯಾಸ್, ಮೋಹನ್ ಎರಡನೇ ಕಾರಿನಲ್ಲಿ ತೆರಳಲು ಸೂಚನೆ ನೀಡಲಾಗಿತ್ತು.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವಿನಿಂದ ಬೆಂಗಳೂರಿಗೆ ಗಾಂಜಾ ಸಾಗಿಸುವ ವೇಳೆ ಬೆಂಗಳೂರಿನ ಪೆಡ್ಲರ್ ಮೂವರು ಸಾಗಣೆದಾರರಿಗೆ ಭಾರಿ ಹಣ ನೀಡುವುದಾಗಿ ಭರವಸೆ ನೀಡಿದ್ದರು.

ಆರೋಪಿಗಳೆಲ್ಲರೂ ಕೇರಳದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರು ಮೂಲದ ಪೆಡ್ಲರ್‌ನ ಸಂಪರ್ಕಕ್ಕೆ ಬಂದು ಉಳಿದವರನ್ನು ಪರಿಚಯಿಸಿದರು ಎನ್ನಲಾಗಿದೆ.

ಅದರಂತೆ ಮೂವರು ಆರೋಪಿಗಳು ಜನವರಿ 24ರಂದು ಅರಕುವಿಗೆ ತೆರಳಿ ಗಾಂಜಾ ತುಂಬಿಕೊಂಡು, ಹೈದರಾಬಾದ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದಾಗ ಮಲ್ಕಾಜ್‌ಗಿರಿ ಎಸ್‌ಒಟಿ ಮತ್ತು ಚೌಟುಪ್ಪಲ್ ಪೊಲೀಸರು ಅವರ ವಾಹನಗಳನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು