ಹೈದರಾಬಾದ್: ಹೈದರಾಬಾದ್ನ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ಮಿನಾರ್ ಎಕ್ಸ್ಪ್ರೆಸ್ ರೈಲಿನ 3 ಬೋಗಿಗಳು ಹಳಿತಪ್ಪಿ ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ರೈಲು ದುರಂತದಲ್ಲಿ ಗಾಯಗೊಂಡಿರುವ ಮೂವರನ್ನು ರೈಲ್ವೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಎಲ್ಲ ರೈಲುಗಳು ಇಲ್ಲಿಗೆ ಬಂದು ಕೊನೆಗೊಳ್ಳುವ ಟರ್ಮಿನಲ್ ನಿಲ್ದಾಣವಾಗಿದೆ. ಆದರೆ ಚಾರ್ಮಿನಾರ್ ಎಕ್ಸ್ಪ್ರೆಸ್ ಈ ಟರ್ಮಿನಲ್ ನಿಲ್ದಾಣದಲ್ಲಿ ನಿಲ್ಲದೇ ಬಂದ ವೇಗದಲ್ಲೇ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಸದ್ಯ ಈ ರೈಲು ಅವಘಡದಿಂದ ಒಟ್ಟು ಮೂರು ಬೋಗಿಗಳು ಹಳ್ಳಿ ತಪ್ಪಿದ್ದು ಬಾಗಿಲು ಬಳಿ ನಿಂತಿದ್ದ 5 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.