ಗ್ಯಾಂಗ್ಟಾಕ್: ಗ್ಯಾಂಗ್ಟಾಕ್ನಿಂದ ಸೋಮ್ಗೊ ಸರೋವರ ಮತ್ತು ನಾಥುಲಾ ಗಡಿಯ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ಮಾರ್ಗದಲ್ಲಿ ಹಿಮಪಾತವಾಗಿದ್ದು, ಮಂಗಳವಾರ ಹಲವಾರು ಪ್ರವಾಸಿಗರು ಹಿಮಪಾತಕ್ಕೆ ಸಿಲುಕಿದ್ದಾರೆ.
ಹಿಮಪಾತದ ಅಡಿಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ಹೊರತೆಗೆಯಲು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 6 ಪ್ರವಾಸಿಗರು ಸಾವನ್ನಪ್ಪಿದ್ದು, 30 ಪ್ರವಾಸಿಗರು ಹಿಮಕುಸಿತದಲ್ಲಿ ಸಿಲುಕಿದ್ದಾರೆ ಎಂದು ಬಿಆರ್ಒ ತಿಳಿಸಿದೆ.
ಗ್ಯಾಂಗ್ಟಾಕ್ನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಜವಾಹರಲಾಲ್ ನೆಹರು ಮಾರ್ಗದ 17 ನೇ ಮೈಲ್ ಬಳಿ ಮಧ್ಯಾಹ್ನ 12.15 ರ ಸುಮಾರಿಗೆ ಈ ದುರಂತ ಭವಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸಿಕ್ಕಿಂ ಪೊಲೀಸ್ , ಸೇನೆ, ಸರ್ಕಾರಿ ಇಲಾಖೆಗಳು ಪರಿಹಾರ ಕಾರ್ಯಾಚರಣೆ ಕೈಗೊಂಡಿವೆ. ಕಳೆದ ಎರಡು-ಮೂರು ವಾರಗಳಿಂದ, ತ್ಸೋಮ್ಗೊ ಸರೋವರ ಮತ್ತು ನಾಥು ಲಾ ಸೇರಿದಂತೆ ಸಿಕ್ಕಿಂನ ಎತ್ತರದ ಪ್ರದೇಶಗಳು ಭಾರೀ ಹಿಮಪಾತ ಉಂಟಾಗುತ್ತಿದೆ.