ಜೈಪುರ: ಬಿಕಾನೇರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.
ಅವರು ಮಧ್ಯಾಹ್ನ 3.25 ಕ್ಕೆ ಬಿಕಾನೇರ್ ತಲುಪಲಿದ್ದಾರೆ ಮತ್ತು ಉದ್ಘಾಟನೆಯ ನಂತರ ರಾಷ್ಟ್ರಪತಿಗಳು ಸಂಜೆ 5.50 ಕ್ಕೆ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.
ಭದ್ರತಾ ಕ್ರಮವಾಗಿ ನಗರ ಮತ್ತು ಡಾ.ಕರ್ಣಿ ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 1,200 ಪೊಲೀಸರನ್ನು ನಿಯೋಜಿಸಲಾಗಿದೆ. ವಾಯುಪಡೆಯ ವಿಶೇಷ ವಿಮಾನದಲ್ಲಿ ರಾಷ್ಟ್ರಪತಿಗಳು ಬಿಕಾನೇರ್ ತಲುಪಲಿದ್ದು, ಇದು ವಾಯುಪಡೆಯ ವಿಶೇಷ ಏರ್ ಸ್ಟ್ರಿಪ್ ನಲ್ಲಿ ಇಳಿಯಲಿದೆ.
ಸಂಜೆ 4 ಗಂಟೆಗೆ ದೇಶಾದ್ಯಂತದ ಕಲಾವಿದರು ಅವರೊಂದಿಗೆ ಸೇರಲಿದ್ದಾರೆ. ಇಲ್ಲಿ ರಾಷ್ಟ್ರೀಯ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸುವ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸಾಮಾನ್ಯ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.