News Karnataka Kannada
Monday, April 29 2024
ರಾಜಸ್ಥಾನ

7ನೇ ತರಗತಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಹೊಡೆದು ಕೊಂದ ಶಿಕ್ಷಕ

Murder Girl 16082021
Photo Credit :

ಜೈಪುರ್: ಹೋಮ್ ವರ್ಕ್ ಪೂರ್ಣವಾಗಿ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕ ಹಿಗ್ಗಾಮುಗ್ಗಾ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಸಾಲ್ಸಾರ್ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಹೋಮ್ ವರ್ಕ್ ಪೂರ್ಣಗೊಳಿಸಿದ ಪರಿಣಾಮ 13 ವರ್ಷದ ಬಾಲಕನಿಗೆ ಶಿಕ್ಷಕ ಮನೋಜ್ ಕುಮಾರ್ ಕೋಲಿನಿಂದ ಥಳಿಸಿದ್ದು, ಬಾಲಕ ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೋಲಾಸರ್ ನಿವಾಸಿ ಓಂಪ್ರಕಾಶ್ ಅವರ ಪುತ್ರ ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದ. ಬುಧವಾರ ಬೆಳಗ್ಗೆ 9.15ಕ್ಕೆ ಆರೋಪಿ ಶಿಕ್ಷಕ ಮನೋಜ್ ಕುಮಾರ್ ಬಾಲಕನ ತಂದೆಗೆ ಕರೆ ಮಾಡಿ, ನಿಮ್ಮ ಮಗ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ತಿಳಿಸಿದ್ದ.

ನಿಮ್ಮ ಮಗ ಹೋಮ್ ವರ್ಕ್ ಮಾಡದ ಪರಿಣಾಮ ಹೊಡೆದಿದ್ದೆ, ಆಗ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಆರೋಪಿ ಶಿಕ್ಷಕ ಬಾಲಕನ ತಂದೆಗೆ ಹೇಳಿದ್ದ. ಆಗ ಓಂಪ್ರಕಾಶ್, ಒಂದು ವೇಳೆ ನೀವು ನನ್ನ ಮಗನನ್ನು ಕೊಂದು ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಶಿಕ್ಷಕ, ನಿಮ್ಮ ಮಗ ಸತ್ತಂತೆ ನಾಟಕವಾಡುತ್ತಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದ.!

ಸ್ವಲ್ಪ ಸಮಯದ ಬಳಿಕ ಓಂಪ್ರಕಾಶ್ ಶಾಲೆಗೆ ಆಗಮಿಸಿದ್ದರು, ಅಷ್ಟರಲ್ಲಿ ಅವರ ಪತ್ನಿ, ವಿದ್ಯಾರ್ಥಿಗಳು ಭಯಾನಕ ದೃಶ್ಯ ನೋಡಲು ಸುತ್ತ ನಿಂತಿದ್ದರು. ಕೂಡಲೇ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಸಂದೀಪ್ ವೈಷ್ಣೋಯಿ ಅವರ ಸಲಹೆ ಮೇರೆಗೆ ಬಾಲಕನ ತಂದೆ ಓಂಪ್ರಕಾಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಆರೋಪಿ ಶಿಕ್ಷಕ ಮನೋಜ್ ಕುಮಾರ್ ನನ್ನು ಸೆಕ್ಷನ್ 302ರ ಪ್ರಕಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು