ರಾಜಸ್ಥಾನ: ದೇವಸ್ಥಾನದ ಹೊರಗೆ ಗೊಲ್ಗಪ್ಪ ತಿನ್ನಲು ಕುಟುಂಬಸ್ಥರು ನಿಂತಾಗ ಮಹಿಳೆಯೊಬ್ಬರ ಸೀರೆ ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರದಲ್ಲಿ ಸಿಲುಕಿಕೊಂಡಿದ್ದು, ಸೀರೆ ಜೊತೆಗೆ ಮಹಿಳೆಯೂ ಕೂಡ ಯಂತ್ರದಲ್ಲಿ ಸಿಲುಕಿದ್ದಾರೆ.
ಈ ವೇಳೆ ತಾಯಿಯ ಕಿರುಚಾಟದ ಸದ್ದು ಕೇಳಿದ ಮಕ್ಕಳು ಆಕೆಯನ್ನು ರಕ್ಷಿಸಲು ಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಮಹಿಳೆ ಸಾವನ್ನಪ್ಪಿದ್ದರು.
ಸಂದೇರಾವ್ ಪೊಲೀಸ್ ಠಾಣೆಯ ಪ್ರಭಾರಿ ಸರ್ಜಿಲ್ ಮಲಿಕ್ ಮಾತನಾಡಿ, ತಖತ್ಗಢ ಪ್ರದೇಶದ ಬಿಟುಡಾ ಪಿರಾನ್ನ ನಿವಾಸಿ ಶಾಂತಿ ಕನ್ವರ್ (32) ಪತ್ನಿ ಸುರೇಶ್ ಸಿಂಗ್ ರಾಜಪುರೋಹಿತ್ ಅವರು ಮಹಾಶಿವರಾತ್ರಿ ನಿಂಬೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದರು. ಆಕೆಯೊಂದಿಗೆ ಪತಿ, ಅತ್ತೆ ಮತ್ತು ಇಬ್ಬರು ಮಕ್ಕಳು ಇದ್ದರು.
ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಇಡೀ ಕುಟುಂಬ ಗೋಲ್ಗಪ್ಪ ತಿನ್ನಲು ಕಬ್ಬಿನ ಜ್ಯೂಸ್ ಕೈಗಾಡಿ ಹತ್ತಿರ ನಿಂತಿತ್ತು. ಈ ವೇಳೆ ಗಾಳಿಯ ರಭಸಕ್ಕೆ ಶಾಂತಿದೇವಿಯ ಸೀರೆಯು ಕಬ್ಬಿನ ರಸ ಯಂತ್ರಕ್ಕೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದರು.