ಗುರುಗ್ರಾಮ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಶಾರ್ಪ್ ಶೂಟರ್ಗಳನ್ನು ಥಕ್ರಾನ್ ಸಹೋದರರ ಹತ್ಯೆ ಪ್ರಕರಣದಲ್ಲಿ ವಿಚಾರಣೆಗಾಗಿ ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಮನೀಶ್ ಅಲಿಯಾಸ್ ಸನ್ನಿ ಕಕ್ರಾನ್ ಮತ್ತು ಅತುಲ್ ಅಲಿಯಾಸ್ ಮೋಟಾ ಎಂದು ಗುರುತಿಸಲಾಗಿದ್ದು, ಇವರಿಬ್ಬರ ತಲೆಗೆ ಉತ್ತರಪ್ರದೇಶ ಪೊಲೀಸರು ತಲಾ ₹ 1 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದ ಆರೋಪಿ ಲಾರೆನ್ಸ್ ಬಿಷ್ಣೋಯ್ ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ಪಂಜಾಬ್ ಪೊಲೀಸರ ವಶಕ್ಕೆ ನೀಡಿದೆ.