News Karnataka Kannada
Sunday, April 28 2024
ಪುದುಚೆರಿ

25ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಲೋಕಸಭೆ ಚುನಾವಣೆ ಹಿನ್ನೆಲೆ ಮಾ. 15ರಂದು ಪ್ರಧಾನಿ ಮೋದಿ ಧಾರವಾಡ ಸೇರಿ ರಾಜ್ಯದ 5 ಕಡೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
Photo Credit :

ಪುದುಚೆರಿ : ದೇಶದ ಯುವಕರು ‘ಸ್ಪರ್ಧಿಸಿ ಮತ್ತು ಗೆಲುವು ಸಾಧಿಸಿ’ ನವ ಭಾರತದ ಮಂತ್ರ ಅಳವಡಿಸಿಕೊಳ್ಳಬೇಕು ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವ ಯುದ್ಧಗಳಲ್ಲಿ ಜಯಗಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಯುವ ಜನತೆಗೆ ಕರೆ ನೀಡಿದ್ದಾರೆ.

ಬುಧವಾರ ಸ್ವಾಮಿ ವಿವೇಕಾನಂದರ ಅವರ ಜಯಂತಿ ಪ್ರಯುಕ್ತ ಪುದುಚೇರಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ 25ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ತ್ಯಾಗ ಬಲಿದಾನಗಳ ಹೊರತಾಗಿಯೂ ಸೂಕ್ತ ಮನ್ನಣೆ ಸಿಗದ ಸ್ವಾತಂತ್ರ್ಯ ಚಳವಳಿಯ ಅಸಾಧಾರಣ ವೀರರ ಬಗ್ಗೆ ಸಂಶೋಧನೆ ಮಾಡಿ ಬರೆಯುವಂತೆ ಸಲಹೆ ನೀಡಿದರು.

ಯುವಕರು ಒಂದಾಗಬೇಕು ಮತ್ತು ಯುದ್ಧಗಳನ್ನು ಗೆಲ್ಲಬೇಕು ಎಂದು ಉತ್ತೇಜಿಸಿದರು. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿನ ಪ್ರದರ್ಶನವನ್ನು ಪ್ರಧಾನಿ ಉಲ್ಲೇಖಿಸಿದರು, ಅಲ್ಲಿ ಭಾಗವಹಿಸುವವರು ತಮ್ಮ ಆತ್ಮವಿಶ್ವಾಸದಿಂದ “ಹಿಂದೆಂದೂ ಕಾಣದ” ಪದಕಗಳನ್ನು ಗೆದ್ದಿದ್ದಾರೆ. ಲಸಿಕಾ ಅಭಿಯಾನದಲ್ಲಿ ಯುವಕರು ಅಗಾಧವಾಗಿ ಭಾಗವಹಿಸುತ್ತಿರುವುದು ಅವರ ಗೆಲುವಿನ ಇಚ್ಛೆ ಮತ್ತು ಅವರಲ್ಲಿನ ಜವಾಬ್ದಾರಿಯ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.

ಪುದುಚೇರಿಯು ‘ಶ್ರೇಷ್ಠ ಭಾರತ್ ಏಕ್ ಭಾರತ್’ಗೆ ಒಂದು ಸುಂದರ ಉದಾಹರಣೆಯಾಗಿದೆ ಮತ್ತು ಯುವಕರು ಇಲ್ಲಿಂದ ಕಲಿಯಲು ಬಹಳಷ್ಟು ಇದೆ ಎಂದು ಮೋದಿ ಹೇಳಿದರು.

ಭಾರತವೊಂದು ಭರವಸೆ, ನಂಬಿಕೆ ಎಂಬಂತೆ ಇಡೀ ಜಗತ್ತು ನಮ್ಮ ರಾಷ್ಟ್ರದ ಕಡೆಗೆ ನೋಡುತ್ತಿದೆ. ಯಾಕೆಂದರೆ ಇಲ್ಲಿನ ಜನರ ಯುವ ಮನಸ್ಥಿತಿ ಹೊಂದಿದ್ದಾರೆ. ಭಾರತದ ಸಾಮರ್ಥ್ಯ, ಕನಸು, ಆಲೋಚನೆ, ಪ್ರಜ್ಞೆಗಳೆಲ್ಲ ಯೌವ್ವನದಲ್ಲೇ ಇವೆ. ಹೀಗಾಗಿ ಸದಾ ಮುನ್ನೆಡೆಯುತ್ತಲೇ ಇರುತ್ತದೆ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು