ಭುವನೇಶ್ವರ: ಒಡಿಶಾ ಸರ್ಕಾರವು ಜಾತ್ರೆ ಮತ್ತು ಮೆಲೋಡಿ ಶೋಗಳಲ್ಲಿ ಅಶ್ಲೀಲ ನೃತ್ಯ, ದ್ವಂದ್ವಾರ್ಥದ ಸಂಭಾಷಣೆಗಳು ಮತ್ತು ಇತರ ಅಸಭ್ಯ ವರ್ತನೆಗಳನ್ನು ನಿರ್ಬಂಧಿಸಿದೆ.
ಎಲ್ಲಾ ಕಲೆಕ್ಟರ್ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಾತ್ರಾ ಸಮಯದಲ್ಲಿ ಅಶ್ಲೀಲ ಕೃತ್ಯಗಳು ಮತ್ತು ನೃತ್ಯದ ವಿರುದ್ಧ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳಿದೆ.
ಜಾತ್ರೆಗಳು ಧಾರ್ಮಿಕ ಕಾರ್ಯದೊಂದಿಗೆ ಮನರಂಜನೆಯ ಸಾಧನಗಳಾಗಿ ಕೂಡ ಪರಿಗಣಿಸಲಾಗುತ್ತದ. ಆದರೆ ಪ್ರಸ್ತುತ ಅಶ್ಲೀಲ ನೃತ್ಯ, ಡಬಲ್ ಮೀನಿಂಗ್ ಡೈಲಾಗ್ ಗಳು, ಅಸಭ್ಯ ವರ್ತನೆಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ ಎಂದು ಸಂಸ್ಕೃತಿ ನಿರ್ದೇಶಕ ರಂಜನ್ ಕುಮಾರ್ ದಾಸ್ ಪತ್ರದಲ್ಲಿ ತಿಳಿಸಿದ್ದಾರೆ.
ಇಂತಹ ಅಶ್ಲೀಲ ನೃತ್ಯ ಮತ್ತು ಡಬಲ್ ಮೀನಿಂಗ್ ಡೈಲಾಗ್ಗಳ ಅತಿಯಾದ ಪ್ರದರ್ಶನದಿಂದಾಗಿ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಈ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಿಂಜರಿಯುವಂತಾಗಿದೆ. ಇದು ಯುವಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಇಂತಹ ಕೃತ್ಯಗಳು ನಮ್ಮ ಸಂಪ್ರದಾಯ ಮತ್ತು ರಾಜ್ಯದ ಸಂಸ್ಕೃತಿಯನ್ನು ನಾಶಪಡಿಸುತ್ತವೆ, ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಜಾತ್ರಾ ಪಾರ್ಟಿಗಳಿಗೆ ಅನುಮತಿ ಪತ್ರಗಳನ್ನು ನೀಡುವಾಗ ನಗ್ನ ನೃತ್ಯ ಮತ್ತು ಡಬಲ್ ಮೀನಿಂಗ್ ಡೈಲಾಗ್ಗಳ ಮೇಲಿನ ನಿರ್ಬಂಧದ ಬಗ್ಗೆ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳಿಗೆ ಸೂಚಿಸಿದ್ದಾರೆ. ನಿಯಮ ಉಲ್ಲಂಘನೆಯಾದಲ್ಲಿ ಸಂಘಟಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಿರಿಯ ಜಾತ್ರಾ ಕಲಾವಿದರು ಮತ್ತು ಒಡಿಶಾ ಜಾತ್ರಾ ಕಲಾಕರ್ ಮಹಾಸಂಘ (ರಾಜ್ಯ ಜಾತ್ರಾ ಕಲಾವಿದರ ಸಂಘ) ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಸ್ವಾಗತಿಸಿದೆ.