ಹೈದರಬಾದ್: ಟಿಕೆಟ್ ಇಲ್ಲದೇ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿ, ಶೌಚಾಲಯದಲ್ಲಿ ಸಿಗರೇಟ್ ಸೇದಿ ರೈಲ್ವೆ ಪೊಲೀಸ್ ಸಿಬ್ಬಂದಿ ಕೈಗೆ ತಗ್ಲಾಕೊಂಡ ಘಟನೆ ಹೈದರಬಾದ್ ನಲ್ಲಿ ನಡೆದಿದೆ.
ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್ ಗೆ ಹೊರಟ್ಟಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಟಿಕೇಟ್ ಇಲ್ಲದೆ ಪ್ರಯಾಣಿಸಿದ್ದಾನೆ. ಬಳಿಕ ಶೌಚಾಲಯದೊಳಗೆ ಲಾಕ್ ಹಾಕಿಕೊಂಡು ಅದರೊಳಗೇ ಕುಳಿತಿದ್ದ ಆತ ಸಿಗರೇಟ್ ಸೇದಿದ್ದಾನೆ.
ಹೊಗೆ ಬಿಟ್ಟ ಪರಿಣಾಮ ರೈಲಿನಲ್ಲಿ ಎಮರ್ಜೆನ್ಸಿ ಅಲಾರಂ ಸದ್ದು ಮಾಡಿದೆ. ಇದರಿಂದ ಗಾಬಾರಿಗೊಂಡ ಪ್ರಯಾಣಿಕರು ತಕ್ಷಣ ರೈಲ್ವೆ ಪೊಲೀಸರಿಗೆ ತುರ್ತು ಕರೆ ಮಾಡಿದ್ದಾರೆ. ಹೀಗಾಗಿ ರೈಲು ಆಗರೈಲು ಮನುಬುಲು ನಿಲ್ದಾನದ ಬಳಿ ನಿಂತಿತ್ತು. ಬಳಿಕ ರೈಲ್ವೆ ಪೊಲೀಸರು ಅಗ್ನಿಶಾಮಕ ಯಂತ್ರದೊಂದಿಗೆ ಕಾರ್ಯಚರಣೆ ನಡೆಸಿ ಶೌಚಾಲಯದ ಗಾಜು ಹೊಡೆದು ಒಳ ನುಗ್ಗಿ ಧೂಮಪಾನಿಯನ್ನು ಬಂಧಿಸಿದ್ದಾರೆ.
ಘಟನೆ ಬಳಿಕ ಮತ್ತೆ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿದೆ.