ಭೋಪಾಲ್: ಈಗ ಆಟೋ ಚಾಲಕರಾಗಿದ್ದರೆ, ರೈತರಾಗಿದ್ದರೆ ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಾರೆ. ಈ ವಿಚಾರ ಈಗ ಸಾಮಾನ್ಯವಾಗಿದೆ. ಮಧ್ಯಪ್ರದೇಶದಲ್ಲಿ ಇದರಿಂದ ಬೇಸತ್ತ ಆಟೋ ಚಾಲಕನೊಬ್ಬ, ತನ್ನ ಇ-ರಿಕ್ಷಾಗೆ ಫೋಟೊ ಹಾಗೂ ಸ್ವವಿವರವುಳ್ಳ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹೌದು. . . ಮಧ್ಯಪ್ರದೇಶದ ದಾಮೋಹ್ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ 29 ವರ್ಷದ ದೀಪೇಂದ್ರ ರಾಥೋಡ್ ಅವರು ಇಂತಹ ಉಪಾಯ ಮಾಡಿದ್ದಾರೆ. ಬಯೋಡೇಟಾ, ಫೋಟೊ ಇರುವ ದೊಡ್ಡದೊಂದು ಹೋರ್ಡಿಂಗ್ಅನ್ನು ತಮ್ಮ ಆಟೋಗೆ ಅಳವಡಿಸಿದ್ದಾರೆ.
ಆಟೋಗೆ ಫೋಟೊ, ಬಯೋಡೇಟಾ ಅಳವಡಿಸಿರುವ ಕುರಿತು ಸುದ್ದಿಗಾರರೊಂದಿಗೆ ದೀಪೇಂದ್ರ ರಾಥೋಡ್ ಮಾತನಾಡಿದ್ದಾರೆ. “ನಾನು ಒಂದಷ್ಟು ಹುಡುಗಿಯರನ್ನು ನೋಡಿದೆ. ಅವರು ಹಣ-ಆಸ್ತಿ ನೋಡಿದರು. ಆಟೋ ಡ್ರೈವರ್ ಎಂದ ಕೂಡಲೇ ಒಂದಷ್ಟು ಹುಡುಗಿಯರು ಮೂಗು ಮುರಿದರು. ನನ್ನ ಸಂಬಂಧಿಕರೂ ಹುಡುಗಿ ಹುಡುಕುವುದನ್ನು ಬಿಟ್ಟರು. ಹಾಗಾಗಿ, ಬಯೋಡೇಟಾ, ಫೋಟೊವನ್ನು ಆಟೋಗೆ ಅಳವಡಿಸಿದ್ದೇವೆ. ಯಾವುದಾದರು ಹುಡುಗಿ ಸಿಕ್ಕರೆ ಮದುವೆಯಾಗಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
“ನಮ್ಮ ಜಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ. ಹಾಗಂತ, ನಾನು ಜಾತಿ-ಧರ್ಮದ ಗಡಿ ಹಾಕಿಕೊಂಡಿಲ್ಲ. ನಾನು ಯಾವುದೇ ಜಾತಿ-ಧರ್ಮದ ಹುಡುಗಿಯನ್ನು ಮದುವೆಯಾಗಲು ಸಿದ್ಧನಿದ್ದೇನೆ. ನನಗೆ ಮದುವೆಯಾಗುವುದು ಅಷ್ಟೇ ಮುಖ್ಯ” ಎಂದು ತಿಳಿಸಿದ್ದಾರೆ. “ಓದಲು-ಬರೆಯಲು ಬರುತ್ತದೆ. ದುಡಿದು ಹಾಕಲು ಆಟೋ ಇದೆ. ಮದುವೆಯಾಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎನ್ನುವ ದೀಪೇಂದ್ರ ರಾಥೋಡ್ ಅವರನ್ನು ವರಿಸುವವರು ಸಂಪರ್ಕಿಸಬಹುದಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…