ಮುಂಬೈ: ಉದ್ಧವ್ ಠಾಕ್ರೆ ಅವರು ಶಿವಸೇನಾದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಸಂಸದ ಅರವಿಂದ್ ಸಾವಂತ್ ಗುರುವಾರ ಹೇಳಿದ್ದಾರೆ.
‘ರಾಜಕೀಯ ಪಕ್ಷವಾಗಿ ಶಿವಸೇನಾ ಮತ್ತು ಸೇನಾ ಶಾಸಕಾಂಗ ಪಕ್ಷವು ಎರಡು ವಿಭಿನ್ನ ಘಟಕಗಳು. ಬಂಡಾಯ ಶಾಸಕರ ಗುಂಪಿಗೆ ಮಾನ್ಯತೆ ಇಲ್ಲ. ಮೂರನೇ ಎರಡು ಭಾಗದಷ್ಟು ಶಾಸಕರು ಮತ್ತೊಂದು ಬಣಕ್ಕೆ ಹೋದರೂ, ಉದ್ಧವ್ ಠಾಕ್ರೆ ಶಿವಸೇನಾ ಮುಖ್ಯಸ್ಥರಾಗಿ ಉಳಿಯುತ್ತಾರೆ. ಕಾನೂನಿನ ಪ್ರಕಾರ, ಶಾಸಕಾಂಗ ಪಕ್ಷದ ನಾಯಕರನ್ನು ಅವರು ಮಾತ್ರ ನೇಮಿಸಬಹುದು’ ಎಂದು ಸಾವಂತ್ ವೆಬ್ ಪೋರ್ಟಲ್ಗೆ ತಿಳಿಸಿದ್ದಾರೆ.
‘ಠಾಕ್ರೆ ಮತ್ತು ಶಿವಸೇನಾವನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಸಾವಂತ್ ಪ್ರತಿಪಾದಿಸಿದ್ದಾರೆ. ಆದರೆ ‘ ಶಿಂಧೆ ನೇತೃತ್ವದ ಬಣವೇ ಪಕ್ಷದ ನಿಜವಾದ ಹಕ್ಕುದಾರ ಎಂದು ಶಿವಸೇನಾ ಬಂಡಾಯ ಶಾಸಕ ಗುಲಾಬ್ರಾವ್ ಪಾಟೀಲ್’ ಬುಧವಾರ ಹೇಳಿದ್ದಾರೆ.