ನಾಗಪುರ: ಎಮ್ಮೆಯೊಂದು ಸುಮಾರು 3 ರಿಂದ 3.5 ತೊಲ ಚಿನ್ನದ ಸರವನ್ನು ತಿಂದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಎಮ್ಮೆಗೆ ಆಹಾರವಾಗಿ ಸೋಯಾಬೀನ್ ಸಿಪ್ಪೆಯನ್ನು ನೀಡುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವು ಆಕಸ್ಮಿಕವಾಗಿ ಬಟ್ಟಲು ಸೇರಿತ್ತು. ಚಿನ್ನವನ್ನೂ ಅನ್ನದಂತೆ ಭಾವಿಸಿದ ಎಮ್ಮೆ ಅದನ್ನು ಸ್ವಾಹಾ ಮಾಡಿದೆ.
ವಾಶಿಮ್ ಜಿಲ್ಲೆಯ ಮಂಗ್ರಾಲ್ಪಿರ್ ತಾಲೂಕಿನ ಸರ್ಸಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಬಳಿಕ ವೈದ್ಯರನ್ನು ಕರೆಸಿ ಬಹಳ ಸೂಕ್ಷ್ಮ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ನಡೆಸಿದ ಬಳಿಕ ಚಿನ್ನದ ಸರವನ್ನು ಹೊರತೆಗೆಯಲಾಗಿದೆ.
“ಚಿನ್ನದ ಸರ ಕಾಣೆಯಾಗಿರುವುದು ಮಧ್ಯಾಹ್ನದ ಬಳಿಕ ನಮಗೆ ಗೊತ್ತಾಗಿತ್ತು. ಆರಂಭದಲ್ಲಿ, ಅದನ್ನು ಯಾರೋ ಕದ್ದಿದ್ದಾರೆ ಎಂದೇ ಭಾವಿಸಿದ್ದೆವು. ಆದರೆ ವಿಚಾರ ಮಾಡಿದಾಗ, ಸೋಯಾಬೀನ್ ಸಿಪ್ಪೆಯ ತಟ್ಟೆಯಲ್ಲಿ ಸರ ಇರಿಸಿದ್ದು, ನೆನಪಾಗಿತ್ತು. ಆಹಾರದ ಜತೆ ಸರವನ್ನೂ ಎಮ್ಮೆ ತಿಂದಿದೆ ಎನ್ನುವುದು ಅರಿವಾಗಿತ್ತು. ಕೂಡಲೇ ನಾವು ಎಮ್ಮೆಯನ್ನು ಸ್ಥಳೀಯ ಪಶು ವೈದ್ಯರ ಬಳಿ ಕರೆದೊಯ್ದೆವು. ವೈದ್ಯರು ಪರೀಕ್ಷಿಸಿದ ಬಳಿಕ ಎಮ್ಮೆ ಸರ ನುಂಗಿರುವುದು ತಿಳಿದು, ಶಸ್ತ್ರ ಚಿಕಿತ್ಸೆ ಮೂಲಕ ಸರ ಹೊರ ತೆಗೆಯಲಾಯಿತು ಎಂದು ರೈತ ರಾಮಹರಿ ಭೋಯಾರ್ ತಿಳಿಸಿದ್ದಾರೆ.
ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.
ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಅಕ್ರಮ ಮದ್ಯ ನೀತಿ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನಿನ್ನೆ ಸುಪ್ರೀಂ ಕೋರ್ಟ್…
ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು ಹಿರಿಯೂರು ಪೊಲೀಸರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್ ಬಳಿ …
ಅಫಜಲಪುರ ತಾಲೂಕಿನ ಆನೂರ ಗ್ರಾಮದ ಆದಿ ಬಸವೇಶ್ವರ ನೂತನ ಕಳಸಾರೋಹಣ ಮತ್ತು ನೂತನ ಮಂದಿರ ಉದ್ಘಾಟನಾ ಕಾರ್ಯಕ್ರಮ ಹನ್ನೊಂದು ಮಠಗಳ…
ಎಸ್ಎಸ್ಎಲ್ ಸಿ ಬಾಲಕಿಯ ರುಂಡ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿ ಹಿಡಿದು ಕಾಡಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿ ಪ್ರಕಾಶನನ್ನ ಪೊಲೀಸರು ಬಂಧಿಸಿದ್ದಾರೆ.