ನಾಗಪುರ: ಪೂರ್ವ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಣಿ-ವರೋರಾ ಹೆದ್ದಾರಿಯಲ್ಲಿ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರಿನಿಂದ ತಯಾರಿಸಿದ ರಸ್ತೆ ಅಪಾಯ ತಡೆ ಪಟ್ಟಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನಾಗ್ಪುರದ ಬಿದಿರು ರಸ್ತೆ ತಡೆಪಟ್ಟಿಯನ್ನು ಅನ್ನು ‘ಬಾಹುಬಲಿ ‘ ಎಂದು ಹೆಸರಿಸಲಾಗಿದೆ ಮತ್ತು ವಿವಿಧ ಮಾನದಂಡಗಳ ಮೇಲೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಇವುಗಳಲ್ಲಿ ಇಂದೋರ್ನ ಪಿತಾಂಪುರದ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಗಳಲ್ಲಿನ ಪರೀಕ್ಷೆಗಳು ಸೇರಿವೆ, ಇದು ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ನಡೆಸಿದ ಫೈರ್ ರೇಟಿಂಗ್ ಪರೀಕ್ಷೆಯಲ್ಲಿ 1 ನೇ ಸ್ಥಾನ ಗಳಿಸಿದೆ ಮತ್ತು ಇಂಡಿಯನ್ ರೋಡ್ ಕಾಂಗ್ರೆಸ್ನಿಂದ ಮಾನ್ಯತೆ ಪಡೆದಿದೆ.
ಪಶ್ಚಿಮ ಬಂಗಾಳದ ಬಿದಿರು ಬಳಕೆ: ಪಶ್ಚಿಮ ಬಂಗಾಳ ಮತ್ತು ಈಶಾನ್ಯದಲ್ಲಿ ಬೆಳೆಯುವ ಬಂಬುಸಾ ಬಾಲ್ಕೂವಾ ಬಿದಿರಿನ ಜಾತಿಯಿಂದ ಕ್ರ್ಯಾಶ್ ಬ್ಯಾರಿಯರ್ ನಿರ್ಮಾಣವಾಗಿದೆ – ಇದನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗುತ್ತದೆ ಮತ್ತು ಮರುಬಳಕೆ ಮಾಡಿದ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ (ಎಚ್ಡಿಪಿಇ) ನಿಂದ ಲೇಪಿಸಲಾಗುತ್ತದೆ.
ಬಿದಿರಿನ ಕ್ರ್ಯಾಶ್ ಬ್ಯಾರಿಯರ್ ಮರುಬಳಕೆ ಮೌಲ್ಯ ಶೇಕಡಾ 50-70 ಎಂದು ಹೇಳಲಾಗಿದ್ದು, ಉಕ್ಕಿನ ತಡೆಗೋಡೆಗಳ ಮರುಬಳಕೆ ಮೌಲ್ಯ ಶೇ 30-50 ರಷ್ಟಿದೆ.
ಈ ಸಾಧನೆಯನ್ನು ಬಿದಿರು ವಲಯಕ್ಕೆ ಮತ್ತು ಇಡೀ ದೇಶಕ್ಕೆ ಮಾದರಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ರಸ್ತೆ ತಡೆಪಟ್ಟಿ ಉಕ್ಕಿಗೆ ಪರಿಪೂರ್ಣ ಪರ್ಯಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರಸ್ನೇಹಿ: ಇದಲ್ಲದೆ, ಇದು ಪರಿಸರ ಕಾಳಜಿ ಧ್ಯೋತಕವಾಗಿದ್ದು, ಗ್ರಾಮೀಣ ಕೃಷಿ ಸ್ನೇಹಿ ಉದ್ಯಮಕ್ಕೆ ಪೂರಕವಾಗಿದೆ. ಆತ್ಮನಿರ್ಭರ ಭಾರತ್ ಉಪಕ್ರಮಗಳನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.