News Karnataka Kannada
Saturday, April 27 2024
ಮಹಾರಾಷ್ಟ್ರ

ಮುಖೇಶ್​​ ಅಂಬಾನಿಯ ಮನೆ ಮೇಲೂ ಜೈ ಶ್ರೀರಾಮ್​ ಘೋಷಣೆ​

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ರಾಮ ನಾಮ ಸ್ಮರಣೆಯೊಂದಿಗೆ ನಾಳೆ ಸೂರ್ಯೋದಯ ಆಗಲಿದೆ. ರಾಮ ಭಕ್ತಿ ಸಾಗರದ ಸೆಲೆ ಆಗಿರುವ ರಾಮನೂರಿನಲ್ಲಿ ರಾಮನ ಮೇಲಿನ ಭಕ್ತಿ ಜೊತೆಗೆ ಪ್ರತಿ ಹಂತದಲ್ಲೂ ರಕ್ಷಣೆಯ ಶಕ್ತಿ ಮಿಳಿತಗೊಂಡಿದೆ.
Photo Credit : News Kannada

ಮುಂಬೈ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ರಾಮ ನಾಮ ಸ್ಮರಣೆಯೊಂದಿಗೆ ನಾಳೆ ಸೂರ್ಯೋದಯ ಆಗಲಿದೆ. ರಾಮ ಭಕ್ತಿ ಸಾಗರದ ಸೆಲೆ ಆಗಿರುವ ರಾಮನೂರಿನಲ್ಲಿ ರಾಮನ ಮೇಲಿನ ಭಕ್ತಿ ಜೊತೆಗೆ ಪ್ರತಿ ಹಂತದಲ್ಲೂ ರಕ್ಷಣೆಯ ಶಕ್ತಿ ಮಿಳಿತಗೊಂಡಿದೆ.

ಹೌದು. . ನಾಳೆ ಮನೆ ಮನೆಗಳಲ್ಲೂ ಸಹ ದೀಪವನ್ನು ಬೆಳಗಿಸುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ನಗರದ ಜನತೆ ಸಜ್ಜಾಗಿದ್ದಾರೆ. ಇದರ ಜೊತೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರೋ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಮೇಲೆ ಜೈ ಶ್ರೀರಾಮ ಎಂದು ಬರೆಯಲಾಗಿದೆ.

ಈಗಾಗಲೇ ನಗರದ ಬಹುತೇಕ ರಸ್ತೆ ಹಾಗೂ ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್​ಗಳು, ತಳಿರು ತೋರಣ ಹಾಗೂ ಮನೆಗಳ ಮೇಲೆ ಶ್ರೀರಾಮನ ಭಾವಚಿತ್ರವುಳ್ಳ ಧ್ವಜವನ್ನು ಹಾರಿಸಲಾಗಿದೆ. ಈಗ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಮೇಲೆ ಜೈ ಶ್ರೀರಾಮ ಎಂದು ಬರೆದಿದ್ದು ವಿಶೇಷವಾಗಿದೆ.

ಇನ್ನೂ ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭಕ್ಕೆ ಭಾರತೀಯ ಉದ್ಯಮದ ಜನರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಎಂಡಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಲಾಗಿದೆ. ಇವರ ಜೊತೆಗೆ ಪ್ರಸಿದ್ಧ ಭಾರತೀಯ ಉದ್ಯಮಿ ರತನ್ ಟಾಟಾ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೂ ಕೂಡ ಆಹ್ವಾನ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು