News Karnataka Kannada
Saturday, April 27 2024
ಮಹಾರಾಷ್ಟ್ರ

ಜೈನ ಸನ್ಯಾಸಿ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ

ಸಲ್ಲೇಖನ ವ್ರತದಿಂದ ದೇಹ ತ್ಯಜಿಸಿದ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಅಮ್ಗಾಂವ್ ಮತ್ತು ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದು ಮೂವರು ಸಾವನ್ನಪ್ಪಿದ  ಘಟನೆ  ನಡೆದಿದೆ.
Photo Credit : News Kannada

ಮಹಾರಾಷ್ಟ್ರ: ಸಲ್ಲೇಖನ ವ್ರತದಿಂದ ದೇಹ ತ್ಯಜಿಸಿದ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಅಮ್ಗಾಂವ್ ಮತ್ತು ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದು ಮೂವರು ಸಾವನ್ನಪ್ಪಿದ  ಘಟನೆ  ನಡೆದಿದೆ.

ಆರು ಜನರಿದ್ದ ಎರ್ಟಿಗಾ ಕಾರು ಕಾಲುವೆಗೆ ಬಿದ್ದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಇತರರು ಸುರಕ್ಷಿತವಾಗಿದ್ದಾರೆ.

ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಛತ್ತೀಸ್‌ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅವರು ಕೊನೆಯುಸಿರೆಳೆದರು.

ದೇಶಾದ್ಯಂತ ಜೈನ ಸಮುದಾಯ ಮತ್ತು ಆಚಾರ್ಯಶ್ರೀ ಅವರ ಭಕ್ತರು ಅವರ ಗೌರವಾರ್ಥ ಇಂದು ತಮ್ಮ ಸಂಸ್ಥೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲು ನಿರ್ಧರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು